
ಸೆ. 25ರಂದು ಶಿತಾ೯ಡಿಯಲ್ಲಿ ಸ್ವಚ್ಛತಾ ಅಭಿಯಾನ
Friday, September 19, 2025
ಮೂಡುಬಿದಿರೆ: ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಮೂಡುಬಿದಿರೆ ತಾಲೂಕು, ರಾಷ್ಟ್ರೀಯ ಸೇವಾ ಯೋಜನೆ, ಶ್ರೀ ಮಹಾವೀರ ಪ. ಪೂ. ಕಾಲೇಜು, ಶಿತಾ೯ಡಿ ಗ್ರಾ. ಪಂಚಾಯತ್ ಮತ್ತು ವಾಲ್ಪಾಡಿ ಗ್ರಾಮ ಪಂಚಾಯತ್ ಇವುಗಹ ಸಹಯೋಗದಲ್ಲಿ ಎರಡು ಪಂಚಾಯತ್ ವ್ಯಾಪ್ತಿಯ ಶಿತಾ೯ಡಿ ಬಸ್ ನಿಲ್ದಾಣದ ಆವರಣದಲ್ಲಿ ಸೆ. 25ರಂದು ಸ್ವಚ್ಛತಾ ಅಭಿಯಾನ ಕಾಯ೯ಕ್ರಮವು ನಡೆಯಲಿದೆ.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಕೆ.ಪಿ.ಸಿ.ಸಿ. ಸದಸ್ಯ ಮಿಥುನ್ ರೈ ಚಾಲನೆ ನೀಡಲಿದ್ದಾರೆ.
ಶಿತಾ೯ಡಿ ಗ್ರಾ.ಪಂ. ಅಧ್ಯಕ್ಷೆ ಆಗ್ನೇಸ್ ಡಿ'ಸೋಜ, ವಾಲ್ಪಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಮತ್ತು ಸದಸ್ಯರು ಭಾಗವಹಿಸಲಿದ್ದಾರೆ.
ಪಂಚ ಗ್ಯಾರಂಟಿ ಅನುಷ್ಠಾನ ತಾಲೂಕು ಸಮತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ತಾಲೂಕು ಪಂಚಾಯತ್ ಕಾಯ೯ನಿವ೯ಹಣಾಧಿಕಾರಿ ಕುಸುಮಾಧರ ಜಿ. ಹಾಗೂ ಶ್ರೀ ಮಹಾವೀರ ಪ. ಪೂ. ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷೀ ಜೆ. ಮಾಲ೯ ಉಪಸ್ಥಿತರಿರುವರು.