ಮೂಡುಬಿದಿರೆಯಲ್ಲಿ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ: ಬದುಕಲ್ಲಿ ಉತ್ತಮವಾದುದನ್ನು ಅಳವಡಿಸಿಕೊಳ್ಳುವ ಉತ್ಸವ ದಸರಾ

ಮೂಡುಬಿದಿರೆಯಲ್ಲಿ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ: ಬದುಕಲ್ಲಿ ಉತ್ತಮವಾದುದನ್ನು ಅಳವಡಿಸಿಕೊಳ್ಳುವ ಉತ್ಸವ ದಸರಾ


ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾ(ರಿ)ದ ವತಿಯಿಂದ  ಐದು ದಿನಗಳ ಕಾಲ ನಡೆಯುವ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ  ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಸೋಮವಾರ ಸಂಜೆ ಚಾಲನೆ ನೀಡಿದರು. 


ನಂತರ ಮಾತನಾಡಿದ ಅವರು  ಅಸುರೀ ಸಂಸ್ಕೃತಿಯಿಂದ ವಿಮುಖರಾಗುವ ಮತ್ತು  ಬದುಕಿನಲ್ಲಿ ಒಳ್ಳೆಯದನ್ನು ಅಳವಡಿಸಿಕೊಳ್ಳುವ ಉತ್ಸವವೇ ದಸರಾ. ಸಂಘಟನೆಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ಅದಕ್ಕೆ ಬೆಲೆ ಹೊರತು ಒಬ್ಬೊಬ್ಬರಾಗಿದ್ದರೆ ಬೆಲೆಯಿಲ್ಲ. ವ್ಯಕ್ತಿಯು ಸಾಹಿತ್ಯ ಸಂಸ್ಕಾರಕ್ಕೆ ಒತ್ತು ನೀಡಿದಾಗ ಉನ್ನತಿಯ ಜತೆಗೆ ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ ಎಂದರು.


ಸಮಾಜ ಮಂದಿರ ಪುರಸ್ಕಾರ:

ಮೂಡುಬಿದಿರೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಉದ್ಯಮಿ, ನವಮಿ ಸಮೂಹ ಸಂಸ್ಥೆಗಳ ನಂದಕುಮಾರ್ ಆರ್.ಕುಡ್ವ ಅವರಿಗೆ 'ಸಮಾಜ ಮಂದಿರ ಪುರಸ್ಕಾರ'ವನ್ನು ನೀಡಿ ಗೌರವಿಸಲಾಯಿತು. 


ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಅಧ್ಯಕ್ಷತೆ ವಹಿಸಿದ್ದರು.

ಗೌರವ ಸ್ವೀಕರಿಸಿ ಮಾತನಾಡಿದ ನಂದ ಕುಮಾರ್ ಕುಡ್ವಾ ಪರಿಶ್ರಮದಿಂದ ಯಶಸ್ಸು ಸಾಧ್ಯವಾಗುತ್ತದೆ. ನಿಯತ್ತಿನ ದುಡಿಮೆ, ಹಿರಿಯರಿಗೆ ಗೌರವ ಗೆಲುವಿನ ಸೂತ್ರಗಳು ಎಂದರು.

ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ,  ಸಹ ಕಾಯ೯ದಶಿ೯ ಕೆ. ಆರ್. ಪಂಡಿತ್, ಆಡಳಿತ ಮಂಡಳಿಯ ಸದಸ್ಯ ಸಿ. ಹೆಚ್. ಗಫೂರ್, ರಾಮ್ ಪ್ರಸಾದ್ ಭಟ್, ಪ್ರತಾಪ್ ಕುಮಾರ್ ಜೈನ್, ಪಿ. ರಾಮ ಪ್ರಸಾದ್ ಭಟ್, . ಕೆ. ವೆಂಕಟೇಶ್ ಕಾಮತ್, ಪಿ. ಜಯರಾಜ್ ಕಂಬಳಿ, ರಾಜೇಶ್ ಕೋಟೆಗಾರ್, ಎಂ.ಎಸ್. ಕೋಟ್ಯಾನ್ ಉಪಸ್ಥಿತರಿದ್ದರು.

ದಸರಾ ಉತ್ಸವದ ಸಂಚಾಲಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಹೆಚ್. ಸುರೇಶ್ ಪ್ರಭು ಸಮ್ಮಾನ ಪತ್ರ ವಾಚಿಸಿದರು. ಕಾಯ೯ದಶಿ೯ ಗಣೇಶ್ ಕಾಮತ್ ವಂದಿಸಿದರು.

ಬಳಿಕ ಸಂತೋಷ್ ಕುಮಾರ್ ಮತ್ತು ಬಳಗದ ‘ ಸವಿಗಾನ ಮೆಲೋಡಿಸ್’ ಅವರಿಂದ ಸಂಗೀತ ರಸಮಂಜರಿ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article