ಬಿಜೆಪಿ ಕಾಯಾ೯ಲಯದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ

ಬಿಜೆಪಿ ಕಾಯಾ೯ಲಯದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ


ಮೂಡುಬಿದಿರೆ: ಏಕಾತ್ಮ ಮಾನವತೆಯ ಹರಿಕಾರ, ಪ್ರಕಾರ ರಾಷ್ಪ್ರವಾದಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನವನ್ನು ಮುಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ವಿದ್ಯಾಗಿರಿಯಲ್ಲಿರುವ ಬಿಜೆಪಿ ಕಾಯ೯ಲಯದಲ್ಲಿ ಆಚರಿಸಲಾಯಿತು.

ಬಿಜೆಪಿ ಮಂಡಲಾಧ್ಯಕ್ಷ ದಿನೇಶ್  ಪುತ್ರನ್ ಅವರು ಪಂಡಿತ್ ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅಪಿ೯ಸಿ ನಮನ ಸಲ್ಲಿಸಿದರು. 

ಪ್ರ. ಕಾಯ೯ದಶಿ೯ ರಂಜಿತ್ ಪೂಜಾರಿ, ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್ ತೋಡಾರು, ಮುಖಂಡರುಗಳಾದ ಕೆ. ಆರ್. ಪಂಡಿತ್, ಬಾಹುಬಲಿ ಪ್ರಸಾದ್,  ಸುಂದರ್ ಕಲ್ಲಮುಂಡ್ಕೂರು, ಬೋಳ ವಿಶ್ವನಾಥ್ ಕಾಮತ್, ಶಶಿಧರ್ ಅಂಚನ್, ಗಿರೀಶ್ ಹಂಡೇಲು, ಸಂಪತ್ ನೆತ್ತೋಡಿ ಮತ್ತಿತರರು ಭಾಗವಹಿಸಿದ್ದರು.

ಮಂಡಲದ 219 ಬೂತ್ ಗಳಲ್ಲಿಯೂ ಕಾಯ೯ಕ್ರಮ ನಡೆಯಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article