ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಭಾಗವತ ಕೆ.ಪಿ. ಹೆಗಡೆ

ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಭಾಗವತ ಕೆ.ಪಿ. ಹೆಗಡೆ


ಕುಂದಾಪುರ: ಬಡುಗುತಿಟ್ಟಿನ ಯಕ್ಷರಂಗದಲ್ಲಿ ಕೆ.ಪಿ. ಹೆಗಡೆ ಎಂದೇ ಪ್ರಸಿದ್ದರಾದ ಕೃಷ್ಣಪರಮೇಶ್ವರ ಹೆಗಡೆ 03-07-1959ರಲ್ಲಿ ಶಿರಸಿ ಸಿದ್ದಾಪುರದ ಗೋಳ್ಗೊಡಿನಲ್ಲಿ ಪರಮೇಶ್ವರ ಹೆಗಡೆ ಹಾಗೂ ತುಂಗಮ್ಮ ದಂಪತಿಯ ಪುತ್ರನಾಗಿ ಜನಿಸಿದವರು. ಆರಂಭದಲ್ಲಿ ಹೊಸತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಪಡೆದು ಅನಂತರ 1977-78ರಲ್ಲಿ ಹಂಗಾರಕಟ್ಟೆಯಕ್ಷಗಾನ ಕಲಾಕೇಂದ್ರಕ್ಕೆ ಸೇರ್ಪಡೆಗೊಂಡು ಗುರುಗಳಾದ ನಾರಾಯಣ ಉಪ್ಯೂರರ ಮೂಲಕ ಕಲೆಯನ್ನು ಹಂತ-ಹಂತವಾಗಿ ಕರಗತಮಾಡಿಕೊಂಡರು. 


ಇವರು ಉಪ್ಪೂರರ ಸಮರ್ಥ ಶಿಷ್ಯನಾಗಿದ್ದು ಬಡಗುತಿಟ್ಟಿನ ಪ್ರಮುಖ ಶೈಲಿಗಳಲ್ಲಿ ಒಂದಾದ ಮಾರ್ವಿ ಶೈಲಿಯ ಪ್ರಾತಿನಿಧಿಕ ಭಾಗವತರು.

1980ರಲ್ಲಿ ಮಂದಾರ್ತಿ ಮೇಳದ ಮೂಲಕ ಯಕ್ಷವೃತ್ತಿಯನ್ನು ಆರಂಭಿಸಿದ ಇವರು ಮುಲ್ಕಿ ಹಿರೇಮಹಾಲಿಂಗೇಶ್ವರ ಕೋಟ, ಶಿರಿಸಿ, ಪಂಚಲಿಂಗೇಶ್ವರ, ಸಾಲಿಗ್ರಾಮ, ಪೆರ್ಡೂರು, ಕುಮಟ, ಕಮಲಶಿಲೆ, ಮಂದಾರ್ತಿ ಮೇಳಗಳಲ್ಲಿ 35ವರ್ಷ ಯಶಸ್ವಿಸೇವೆ ಸಲ್ಲಿಸಿದ್ದಾರೆ ಹಾಗೂ 22 ವರ್ಷ ಹಂಗಾರಕಟ್ಟೆಯಕ್ಷಗಾನ ಕಲಾಕೇಂದ್ರದಲ್ಲಿ ಐದು ವರ್ಷ ಮಂದಾರ್ತಿಯಲ್ಲಿ, ತೆಕ್ಕಟ್ಟೆಯಶಸ್ವಿ ಕಲಾವೃಂದದಲ್ಲಿ ಗುರುಗಳಾಗಿದ್ದಾರೆ. ಇಂದು ಯಕ್ಷರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ಯುವ ಕಲಾವಿದರು ಇವರ ಶಿಷ್ಯರಾಗಿದ್ದಾರೆ. 

ರಾಮಾಂಜನೇಯ-ಚೂಡಾಮಣಿ, ಭಸ್ಮಾಸುರ ಮೋಹಿನಿ ಮುಂತಾದ ಪೌರಾಣಿಕ ಪ್ರಸಂಗಗಳ ಹಾಡುಗಾರಿಕೆಗೆ ಜನಮನ್ನಣೆ ಗಳಿಸಿದೆ.

ಪ್ರಸ್ತುತ ಕೋಟ ಹಾಗೂ ಶಿರಸಿ ಸಿದ್ದಾಪುರದ ಗೋಳ್ಗೊಡಿನಲ್ಲಿ ಇವರು ವಾಸವಿದ್ದಾರೆ.

ಪತ್ನಿ, ಲಲಿತಾ ಹೆಗಡೆ, ಪುತ್ರ ವಿನಯ್‌ ಹಾಗೂ ಪುತ್ರಿ ಸಹನಾಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇವರ ಯಕ್ಷಸೇವೆಯನ್ನು ಗುರುತಿಸಿ ಈ ಹಿಂದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಜತೆಗೆ ಹಲವಾರು ಸಂಘ-ಸಂಸ್ಥೆಗಳ ಗೌರವ ದೊರೆತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article