ಭಕ್ತರ ಮನಗೆದ್ದ ಮೇಧಾ ವಿದ್ಯಾಭೂಷಣ ಅವರ ಭಕ್ತಿಗೀತೆ-ಅಮೃತ ಭಕ್ತಿ ಸುಧಾ

ಭಕ್ತರ ಮನಗೆದ್ದ ಮೇಧಾ ವಿದ್ಯಾಭೂಷಣ ಅವರ ಭಕ್ತಿಗೀತೆ-ಅಮೃತ ಭಕ್ತಿ ಸುಧಾ


ಮಂಗಳೂರು: ರಾಮಕೃಷ್ಣ ಮಿಷನ್, ಮಂಗಳೂರು ಸಂಸ್ಥೆಯ ಅಮೃತ ವರ್ಷ 75 ವರ್ಷಗಳ ಸೇವಾ ಸಂಭ್ರಮಾಚರಣೆ ಅಂಗವಾಗಿ ‘ಅಮೃತ ಭಕ್ತಿ ಸುಧಾ’ ಎಂಬ ಭಕ್ತಿ ಗಾಯನ ಕಾರ್ಯಕ್ರಮವು ಅ.12 ರಂದು ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ಶೈಲೇಂದ್ರನಾಥ್ ಶೀತ್ ಉದ್ಘಾಟಿಸಿದರು. ಮಂಗಳೂರಿನ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 


ಸಂಜೆಯ ಮುಖ್ಯ ಆಕರ್ಷಣೆಯಾಗಿ ಖ್ಯಾತ ಗಾಯಕಿ ಮೇಧಾ ವಿದ್ಯಾಭೂಷಣ ಅವರು ಭಾವಪೂರ್ಣ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಅವರಿಗೆ ವಯಲಿನ್‌ನಲ್ಲಿ ಪ್ರದೇಶ್ ಆಚಾರ್, ಮೃದಂಗದಲ್ಲಿ ಫಣೀಂದ್ರ ಭಾಸ್ಕರ್, ಹಾಗೂ ಘಟದಲ್ಲಿ ಬಿ.ಎಸ್. ರಘುನಂದನ್ ಅವರು ಸಂಗಡಿಗರಾಗಿ ಸಹಕರಿಸಿದರು.


ಭಕ್ತಿಯ ಸಂಜೆಯು ಆಧ್ಯಾತ್ಮಿಕ ವಾತಾವರಣವನ್ನು ಉಜ್ವಲಗೊಳಿಸಿತು. ಸುಮಾರು 550 ಮಂದಿ ಭಕ್ತರು ಮತ್ತು ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article