ನನ್ನ ವಿರುದ್ಧದ ಆರೋಪ ನಿರಾಧಾರ: ಸ್ಪೀಕರ್
Wednesday, October 29, 2025
ಮಂಗಳೂರು: ನನ್ನ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣವಾಗಿ ಅಸತ್ಯ, ನಿರಾಧಾರ ಮತ್ತು ರಾಜಕೀಯ ನಿರಾಶೆಯಿಂದ ಮಾಡಿರುವಂತಹದು. ಈ ಸುಳ್ಳು ಮತ್ತು ತಪ್ಪು ಪ್ರಚಾರವು ವಿಧಾನಸೌಧದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ತನ್ನ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು, ನನ್ನ ಅವಧಿಯಲ್ಲಿ ನಡೆದ ಪ್ರತಿಯೊಂದು ಸೌಕರ್ಯ ವಿಸ್ತರಣೆ, ಸುಧಾರಣೆ ಮತ್ತು ಆಧುನೀಕರಣ ಕಾರ್ಯಗಳು ಸಂಪೂರ್ಣ ಪಾರದರ್ಶಕತೆಯೊಂದಿಗೆ, ಜನಪ್ರತಿನಿಧಿಗಳಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ನಡೆದಿವೆ. ಇಂದಿನ ವಿಧಾನಸೌಧದಲ್ಲಿ ಶಾಸಕರಿಗೆ ಲಭ್ಯವಾಗಿರುವ ಮೂಲಸೌಕರ್ಯ ಮತ್ತು ಸೌಲಭ್ಯಗಳು ಇತ್ತೀಚಿನ ಇತಿಹಾಸದಲ್ಲಿಯೇ ಕಾಣದ ಪ್ರಗತಿಗೆ ಸಾಕ್ಷಿಯಾಗಿವೆ. ಸತ್ಯವನ್ನು ತಡೆಯಲು ಸಾಧ್ಯವಿಲ್ಲ. ಅಭಿವೃದ್ಧಿ ನಿಲ್ಲಿಸಲು ಸಾಧ್ಯವಿಲ್ಲ. ವಿಧಾನಸೌಧವನ್ನು ಇನ್ನಷ್ಟು ಬಲಿಷ್ಠ ಹಾಗೂ ಸಮರ್ಥವಾಗಿಸುವುದು ನನ್ನ ಬದ್ಧತೆ ಎಂದಿದ್ದಾರೆ.