ದ.ಕ ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳ ಕ್ರೀಡಾಕೂಟ

ದ.ಕ ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳ ಕ್ರೀಡಾಕೂಟ


ಮೂಡುಬಿದಿರೆ: ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ, ಮುಂದಿನ ಸ್ಪರ್ಧೆಗಳಿಗೆ ಹೆಚ್ಚಿನ ತಯಾರಿ ನಡೆಸುವ ಮನೋಭಾವವನ್ನು ಕ್ರೀಡಾಳುಗಳು ಹೊಂದಬೇಕು ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು. 

ಅವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ. ಹಾಗೂ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸ್ವರಾಜ್ಯ ಮೈದಾನದಲ್ಲಿ ನಡೆದ ಜಿಲ್ಲಾ  ಮಟ್ಟದ ಪದವಿ ಪೂರ್ವ ಕಾಲೇಜುಗಳ 2025-26ರ ಸಾಲಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.


ಆಳ್ವಾಸ್ ಪದವಿ ಕಾಲೇಜು (ಸ್ವಾಯತ್ತ) ಪ್ರಾಚಾರ್ಯ ಪ್ರೊ. ಕುರಿಯನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಯಲ್ಲಿ ಒಲಿಂಪಿಕ್ಸ್ ವರೆಗೂ ಸಾಗಲು ಪ್ರೇರಣೆಯಾಗಿದೆ. ಇದಕ್ಕೆ ಬೇಕಾದ ತರಬೇತಿಯು ಆಳ್ವಾಸ್ ನಲ್ಲಿದ್ದು ಇದು  ಕ್ರೀಡಾಳುಗಳಿಗೆ, ಸಂಸ್ಥೆಯವರಿಗೆ ಮಾದರಿಯಾಗಿದೆ. ಈ ನೆಲೆಯಲ್ಲಿ ಸಾಧನೆ ಮಾಡಿ ಉನ್ನತ ಮಟ್ಟಕ್ಕೇರಲು ಪ್ರಯತ್ನಿಸಿರಿ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶಾಲಾ ಶಿಕ್ಷಣ ಇಲಾಖೆ (ಪ.ಪೂ.) ಉಪನಿರ್ದೇಶಕಿ ರಾಜೇಶ್ವರಿ ಮಾತನಾಡಿ, ದ.ಕ. ಜಿಲ್ಲೆಯು ಕ್ರೀಡಾರಂಗದಲ್ಲಿ ಎದ್ದುಕಾಣಿಸುವ ಸಾಧನೆ ತೋರುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸುತ್ತಿದೆ. ಈಗಾಗಲೇ ನಮ್ಮ ಸರಕಾರ ಉತ್ತಮ ಸಾಧಕ ಕ್ರೀಡಾಳುಗಳಿಗೆ ಉದ್ಯೋಗದಲ್ಲಿ ಶೇ. 2ರ ಮೀಸಲಾತಿ ಪ್ರಕಟಿಸಿರುವುದು ಕ್ರೀಡಾಪಟುಗಳಿಗೆ ಚೇತೋಹಾರಿಯಾಗಿದೆ. ಒಲಿಂಪಿಕ್್ಸ ನಲ್ಲಿ ಚಿನ್ನ ಗೆಲ್ಲುವವರಿಗೆ 3 ಕೋಟಿ ರೂ., ರಜತ ಗೆಲ್ಲುವವರಿಗೆ 2 ಕೋಟಿ ಹಾಗೂ ಕಂಚಿನ ಪದಕ ಗೆಲ್ಲುವವರಿಗೆ ಒಂದು ಕೋಟಿ ರೂ.ವಿಶೇಷ ಬಹುಮಾನ ಘೋಷಿಸಿರುವುದನ್ನು ನಮ್ಮ ಕ್ರೀಡಾಪಟುಗಳು ಗಮನಿಸಿ ಇದಕ್ಕೆ ತಕ್ಕ ಪರಿಶ್ರಮ ಪಡುವ ಛಲವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.

ಆಳ್ವಾಸ್ ಪ.ಪೂ. ಕಾಲೇಜು ಪ್ರಾಚಾರ್ಯ ಪ್ರೊ. ಮೊಹಮ್ಮದ್ ಸದಾಕತ್ ಸ್ವಾಗತಿಸಿದರು.

ಜಿಲ್ಲಾ ಕ್ರೀಡಾಸಂಯೋಜಕ, ಎಡಪದವು ಸ್ವಾಮಿ ವಿವೇಕಾನಂದ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರೇಮನಾಥ ಶೆಟ್ಟಿ ಕಾವು, ಆಳ್ವಾಸ್ ಪ.ಪೂ. ಕಾಲೇಜಿನ ದೈ.ಶಿ. ಉಪನ್ಯಾಸಕ ನವೀನ್ ರೈ, ತಾ. ಕ್ರೀಡಾ ಸಂಯೋಜಕ, ಜೈನ ಪಿ.ಯು. ಕಾಲೇಜಿನ ದೈ.ಶಿ. ಉಪನ್ಯಾಸಕ ನವೀನ್ ಹೆಗ್ಡೆ ಉಪಸ್ಥಿತರಿದ್ದರು.

ಆಳ್ವಾಸ್ ಪ.ಪೂ. ಕಾಲೇಜಿನ ಕಲಾವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ನಿರೂಪಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article