ಹೈಕೋಟ್೯ ಪೀಠ ಸ್ಥಾಪನೆಗೆ ಮೂಡುಬಿದಿರೆಯಲ್ಲಿ ಪೋಸ್ಟ್ ಕಾಡ್೯ ಚಳುವಳಿ
ಸಾವ೯ಜನಿಕರ ನೆಲೆಯಲ್ಲಿ ಮಾತನಾಡಿದ ವಿಶ್ವ ಕುಮಾರ್ ಜನರ ಸಾವಿರಾರು ವ್ಯಾಜ್ಯಗಳು ನಡೆಯುತ್ತಿದ್ದು ಅವುಗಳ ನಿವ೯ಹಣೆಗೆ ಬೆಂಗಳೂರಿಗೇ ಹೋಗಬೇಕಾಗಿದೆ ಆದ್ದರಿಂದ ಮಂಗಳೂರಿನಲ್ಲಿ ಪೀಠ ಸ್ಥಾಪನೆಯಾದರೆ ಜನರಿಗೆ ಅನುಕೂಲವಾಗುತ್ತದೆ ಎಂದರು.
ಹೈಕೋರ್ಟ್ ಪೀಠ ಹೋರಾಟ ಸಮಿತಿ ಕಾರ್ಯದರ್ಶಿ ಪ್ರವೀಣ್ ಲೋಬೋ, ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ., ಕಾಯ೯ದಶಿ೯ ಜಯಪ್ರಕಾಶ್, ಪುರಸಭೆಯ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯ ಜೊಸ್ಸಿ ಮಿನೇಜಸ್, ತಾಲೂಕು ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ, ವಕೀಲೆ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್, ಮತ್ತಿತರರು ಈ ಸಂದಭ೯ದಲ್ಲಿದ್ದರು.
ನನ್ನ ಅಜ್ಜ, ಮಾವ ಇದೀಗ ನಾನು ಕಳೆದ 48 ವಷ೯ಗಳಿಂದ ವ್ಯಾಜ್ಯ ನಿವ೯ಹಣೆಗೆ ಬೆಂಗಳೂರಿಗೆ ಹೋಗಿ ಬರುತ್ತಿದ್ದು ಇದು ತುಂಬಾ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಾ೯ಟಕ ಉಚ್ಛ ನ್ಯಾಯಾಲಯದ ಪೀಠವು ಮಂಗಳೂರಿನಲ್ಲಿ ಸ್ಥಾಪನೆಯಾದರೆ ಬೆಂಗಳೂರಿಗೆ ಹೋಗಿ ಬರುವುದು ತಪ್ಪುತ್ತದೆ ಹಲವು ಜನರ ಸಮಸ್ಯೆ ಕಡಿಮೆಯಾಗುತ್ತದೆ : ಪ್ರಕಾಶ್ ಗೌಡ ( ತಾ. ಪಂ. ಮಾಜಿ ಸದಸ್ಯ)


