16ನೇ ವಷ೯ದ ಪಣಪಿಲ 'ಜಯ-ವಿಜಯ' ಜೋಡುಕರೆ ಕಂಬಳ: ಫಲಿತಾಂಶ

16ನೇ ವಷ೯ದ ಪಣಪಿಲ 'ಜಯ-ವಿಜಯ' ಜೋಡುಕರೆ ಕಂಬಳ: ಫಲಿತಾಂಶ


ಮೂಡುಬಿದಿರೆ: ತಾಲೂಕಿನ ಪಣಪಿಲದಲ್ಲಿ ನಂದೊಟ್ಟು ಯುವರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಮಧ್ಯರಾತ್ರಿ ವರೆಗೆ ನಡೆದ 16ನೇ ವಷ೯ದ 'ಜಯ-ವಿಜಯ' ಜೋಡುಕರೆ ಕಂಬಳದ ಫಲಿತಾಂಶ ನೇಗಿಲು ಹಿರಿಯ- 13 ಜತೆ, ನೇಗಿಲು ಕಿರಿಯ: 70 ಜತೆ, ಹಗ್ಗ ಕಿರಿಯ: 19 ಜತೆ ಹೀಗೆ ಒಟ್ಟು  102 ಕೋಣಗಳು ಭಾಗವಹಿಸಿದ್ದವು. 


ನೇಗಿಲು ಹಿರಿಯ:

ಪ್ರಥಮ ಹಾಗೂ ದ್ವಿತೀಯ: ಕೌಡೂರುಬೀಡು ತುಷಾರ್ ಮಾರಪ್ಪ ಭಂಡಾರಿ A & B

( ಓಡಿಸಿದವರು: ಭಟ್ಕಳ ಶಂಕರ & ಉಜಿರೆ ಸ್ಪಂದನ್ ಶೆಟ್ಟಿ)


ನೇಗಿಲು ಕಿರಿಯ:

ಪ್ರಥಮ: ಮೂಲ್ಕಿ ಚಿತ್ರಾಪು ಸಾನದ ಮನೆ ಅಂಬಿಕಾ ರವೀಂದ್ರ ಪೂಜಾರಿ

ದ್ವಿತೀಯ: ಪಣಪಿಲ ಫ್ರೆಂಡ್ಸ್ ಯುವ ಬಾಂಧವರು.

( ಓಡಿಸಿದವರು: ಬಾರಾಡಿ ಸತೀಶ್ ಸಪಳಿಗ & ಇಳಿಯೂರು ದಿನೇಶ್ ಪೂಜಾರಿ)

ಹಗ್ಗ ಕಿರಿಯ:

ಪ್ರಥಮ: ಮೂಡಾರ್ ಹಚ್ಚೊಟ್ಟು ಫ್ಲೋರ ನಿವಾಸ ರೋಹನ್ ರಂಜಿತ್ ಫೆರ್ನಾಂಡಿಸ್

ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ನರಸಿಂಹ ಶೆಟ್ಟಿ.

( ಓಡಿಸಿದವರು: ಬೈಂದೂರು ವಿವೇಕ್ ಪೂಜಾರ್ & ಮಂಗಲ್ಪಾಡಿ ರಕ್ಷಿತ್ ಶೆಟ್ಟಿ).

ಯಶಸ್ವಿಯಾದ ಮೊದಲ ಕಂಬಳ : ಪಣಪಿಲದಲ್ಲಿ ನಡೆದ ಈ ಋತುವಿನ ಮೊದಲ ಕಂಬಳ ಶಿಸ್ತು ಹಾಗೂ ಸಮಯ ಪ್ರಜ್ಞೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯಿತು. 

ಕಂಬಳ ಸಮಿತಿಯ ಗೌರವಾಧ್ಯಕ್ಷ ಸುಭಾಶ್ಚಂದ್ರ ಚೌಟ, ಉಪಾಧ್ಯಕ್ಷ ಮುನಿರಾಜ್ ಹೆಗ್ಡೆ, ಪ್ರಧಾನ ಅಶ್ವಥ್ ಪಣಪಿಲ ಹಾಗೂ  ಸಮಿತಿಯ ಪದಾಧಿಕಾರಿಗಳ ಪರಿಶ್ರಮದಿಂದಾಗಿ ಕಂಬಳ ಉತ್ತಮ ರೀತಿಯಲ್ಲಿ ನಡೆಯಲು ಕಾರಣವಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article