ಎರಡು ನಾಡ ದೋಣಿಗಳಿಗೆ ಬೆಂಕಿ
Saturday, November 15, 2025
ಉಳ್ಳಾಲ: ಉಳ್ಳಾಲ ಎರಡು ನಾಡ ದೋಣಿಗಳು ಬೆಂಕಿ ಹಿಡಿದು ಭಾಗಶಃ ಹಾನಿಯಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೋಡಿಯಲ್ಲಿ ನಡೆದಿದ್ದು, ದುಷ್ಕರ್ಮಿಗಳು ಈ ಕೃತ್ಯ ಎಸಗಿರ ಬೇಕು ಎಂದು ಶಂಕಿಸಲಾಗಿದೆ.
ರಮ್ಲತ್ ಅವರ ಮಾಲೀಕತ್ವದ ಹವ್ವ ಹಲೂಮ್, ಆಲಿಯಬ್ಬ ಮಾಲೀಕತ್ವದ ಮೊಹಮ್ಮದ್ ಹಫೀಝ್ ಎಂಬ ಹೆಸರಿನ ಎರಡು ದೋಣಿಗಳಿಗೆ ಬೆಂಕಿ ಹಿಡಿದಿದ್ದು ಈ ಮಾಹಿತಿ ತಿಳಿದು ಆಗಮಿಸಿದ ಮಾಲೀಕರು ಬೆಂಕಿ ನಂದಿಸಿದ್ದಾರೆ.
ಕೋಡಿ ನಿವಾಸಿ ಆಲಿಯಬ್ಬ ಹಾಗೂ ಮೊಯ್ಯದ್ದಿ ಅವರು ನಾಡದೋಣಿಯನ್ನು ಕೋಡಿಯ ನೇತ್ರಾವತಿ ನದಿಯ ದಡದಲ್ಲಿ ನಿಲ್ಲಿಸಿ ಉಳ್ಳಾಲ ಪೇಟೆಗೆ ತೆರಳಿದ್ದರು. ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮೀನುಗಾರಿಕೆ ಯನ್ನೇ ವೃತ್ತಿಯಾಗಿಸಿಕೊಂಡು ಜೀವನ ನಡೆಸುವ ನಮಗೆ ತೊಂದರೆ ಆಗಿದೆ ಎಂದು ಆಲಿಯಬ್ಫ ಪತ್ರಿಕೆಗೆ ತಿಳಿಸಿದ್ದಾರೆ. ಈ ಬಗ್ಗೆ ಮೊಯ್ಯದ್ದಿ ಹಾಗೂ ಹಾಗೂ ಆಲಿಯಬ್ಬ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರತ್ಯೇಕ ಎನ್ಸಿಆರ್ ದಾಖಲಾಗಿದೆ.