ಮೂಡುಬಿದಿರೆ: ಶಿವರಾಮ ಕಾರಂತ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ

ಮೂಡುಬಿದಿರೆ: ಶಿವರಾಮ ಕಾರಂತ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ

ಮೂಡುಬಿದಿರೆ: ಪ್ರತೀ ವರ್ಷ ನೀಡಲಾಗುವ ಶಿವರಾಮ ಕಾರಂತ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ಶಿವರಾಮ ಕಾರಂತ ಪ್ರತಿಷ್ಠಾನ  ಆಹ್ವಾನಿಸಿದೆ.

2021ರಿಂದ 2026ರವರೆಗೆ ಪ್ರಥಮ ಮುದ್ರಿತಗೊಂಡ ಕೃತಿಗಳಲ್ಲಿ ಉತ್ತಮವಾದ ಮೂರು ಕೃತಿಗಳನ್ನು ಆಯ್ಕೆ ಮಾಡಿ, ಪ್ರತಿಯೊಬ್ಬ ಲೇಖಕರಿಗೆ ₹10,000 ಗೌರವ ಸಂಭಾವನೆಯೊಂದಿಗೆ ಪುರಸ್ಕಾರ ನೀಡಲಾಗುತ್ತದೆ. ಈ ಪುರಸ್ಕಾರವನ್ನು ಪ್ರತಿಷ್ಠಾನವು ಕಳೆದ ಹಲವು ವರ್ಷಗಳಿಂದ ಸಾಹಿತ್ಯ ಕ್ಷೇತ್ರದ ಉತ್ತೇಜನಕ್ಕಾಗಿ ನೀಡುತ್ತಾ ಬಂದಿದೆ.

ಆಸಕ್ತರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಮೇ 31ರೊಳಗೆ ಶಿವರಾಮ ಕಾರಂತ ಪ್ರತಿಷ್ಠಾನ, ಕನ್ನಡ ಭವನ, ಮೂಡುಬಿದಿರೆ – 574227 ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9743533105 ಅನ್ನು ಸಂಪರ್ಕಿಸಬಹುದು.

ಉತ್ತಮ ಕೃತಿಗಳನ್ನು ಯಾರಾದರೂ ಶಿಫಾರಸು ಮಾಡಬಹುದಾಗಿದೆ. ಈಗಾಗಲೇ ಕೃತಿಗಳನ್ನು ಕಳುಹಿಸಿದವರು ಪುನಃ ಕಳುಹಿಸುವ ಅಗತ್ಯವಿಲ್ಲ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article