ಎಂಆರ್‌ಪಿಎಲ್‌ನಲ್ಲಿ ಜಾಗತಿಕ ಪರಿಸರ ದಿನಾಚರಣೆ

ಎಂಆರ್‌ಪಿಎಲ್‌ನಲ್ಲಿ ಜಾಗತಿಕ ಪರಿಸರ ದಿನಾಚರಣೆ


ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ತನ್ನ ನೌಕರರ ಮನರಂಜನಾ ಕೇಂದ್ರದಲ್ಲಿ ಜಾಗತಿಕ ಪರಿಸರ ದಿನವನ್ನು ಆಚರಿಸಿತು. ಈ ವರ್ಷದ ಘೋಷವಾಕ್ಯ ’ಪ್ರಕೃತಿಯಿಂದ ಪ್ರೇರಿತರಾಗಿ. ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ’ ಎಂದಾಗಿತ್ತು.

ಮುಖ್ಯ ಅತಿಥಿ ಪದ್ಮಶ್ರೀ ಪುರಸ್ಕೃತ, ಖ್ಯಾತ ಪರಿಸರವಾದಿ ಶ್ಯಾಮ್ ಸುಂದರ್ ಪಾಲಿವಾಲ್ ಅವರು ಮುಖ್ಯ ಅತಿಥಿಯಾಗಿದ್ದರು. ಅವರು ಗಿಡ ನೆಡುವಿಕೆ ಮತ್ತು ಪರಿಸರ ಸ್ನೇಹಿ ಜೀವನಶೈಲಿಯ ಮಹತ್ವವನ್ನು ಒತ್ತಿಹೇಳಿದರು.

ನಿರ್ದೇಶಕ ನಂದಕುಮಾರ್ ವಿ. ಪಿಳ್ಳೈ ಅವರು ಎಂಆರ್‌ಪಿಎಲ್‌ನ ಪಿಇಟಿ ಬಾಟಲಿ ಮರುಬಳಕೆ ಘಟಕ ಸೇರಿದಂತೆ ಹಲವು ಸುಸ್ಥಿರ ಯೋಜನೆಗಳನ್ನು ಪರಿಚಯಿಸಿದರು. ಮತ್ತೊಬ್ಬ ನಿರ್ದೇಶಕ ದೇವೆಂದ್ರ ಕುಮಾರ್ ಅವರು ಪ್ಲಾಸ್ಟಿಕ್ ಕಡಿತ ಮತ್ತು ತ್ಯಾಜ್ಯ ವಿಂಗಡಣೆಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಿಸರ ಪ್ರತಿಜ್ಞೆ ಸ್ವೀಕರಿಸಲಾಯಿತು. ಯುವಜನರಲ್ಲಿ ಮೊಬೈಲ್ ಹಾವಳಿಯ ದುಷ್ಪರಿಣಾಮಗಳ ಕುರಿತು ದಿನೇಶ್ ಅತ್ತಾವರ್ ತಂಡದಿಂದ ಕಿರುನಾಟಕ ಪ್ರದರ್ಶನಗೊಂಡಿತು.

ತಿಂಗಳ ಪರಿಸರ ಅಭಿಯಾನದ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು ಮತ್ತು ಬಂದಿದ್ದ ಎಲ್ಲರಿಗೂ ಗಿಡ ಹಾಗೂ ಸೆಣಬಿನ ಚೀಲಗಳನ್ನು ವಿತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article