Putturu: ಪದವಿ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ನೆಚ್ಚಿನ ಆಯ್ಕೆ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯ
ಉದ್ಯೋಗಪರ ಕಾಂಬಿನೇಶನ್, ಪ್ರಾಯೋಗಿಕ ತರಬೇತಿಗಳನ್ನೊಳಗೊಂಡ ವಿಶಿಷ್ಟ ಕಾಲೇಜು
ಪುತ್ತೂರು: ಪಿಯು ಶಿಕ್ಷಣ ಪೂರೈಸಿದ ನಂತರಯಾವಕಾಲೇಜಿಗೆ ಸೇರಿಕೊಳ್ಳಬೇಕು? ಯಾವಕೋರ್ಸ್ಅನ್ನು ಆಯ್ದುಕೊಳ್ಳಬೇಕು? ವಿಷಯ ಸಂಯೋಜನೆಗಳು (ಕಾಂಬಿನೇಶನ್) ಯಾವುದಿರಬೇಕು? ಯಾವ ವಿಷಯಗಳನ್ನು ಓದಿದರೆ ಮುಂದೆ ಉತ್ತಮ ಭವಿಷ್ಯ ಸಾಕಾರಗೊಳ್ಳಬಹುದು? ಇತ್ಯಾದಿ ವಿಷಯಗಳ ಬಗೆಗೆ ಇದೀಗ ತಾನೇ ಪಿ.ಯು ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳೇಳುವುದು ಸಹಜ. ಅನೇಕ ಹೆತ್ತವರಲ್ಲೂ ಇಂತಹ ಗೊಂದಲಗಳಿರುವುದು ಸಾಮಾನ್ಯ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಕಾಣಿಸಿಕೊಳ್ಳುವ ಶಿಕ್ಷಣ ಸಂಸ್ಥೆಯೆಂದರೆ ಪುತ್ತೂರಿನ ಅಂಬಿಕಾ ಪದವಿ ಕಾಲೇಜು.
ಪುತ್ತೂರಿನ ನಟ್ಟೋಜ ಫೌಂಡೇಶನ್ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಪುತ್ತೂರಿನ ಆಸುಪಾಸಿನ ವಾಣಿಜ್ಯ ವಿದ್ಯಾರ್ಥಿಗಳಲ್ಲಿನ ಆಸಕ್ತಿಯನ್ನು ಗಮನಿಸಿ ಸಿಎ ಹಾಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಅಡಿಯಿಡಬೇಕಾದರೆ ಎದುರಿಸಬೇಕಾದ ಐಬಿಪಿಎಸ್ ಪರೀಕ್ಷಾ ತರಬೇತಿ ಸಹಿತವಾಗಿರುವ ಇಂಟಗ್ರೇಟೆಡ್ ಬಿಕಾಂ ಅನ್ನು ಅಂಬಿಕಾ ಕಾಲೇಜು ಆರಂಭಿಸಿದೆ. ಹಾಗಾಗಿ ಇಂತಹ ತರಬೇತಿಗಳಿಗಾಗಿ ದೂರದ ಊರುಗಳಿಗೆ ತೆರಳಬೇಕಾದ ಅವಶ್ಯಕತೆ ಪುತ್ತೂರಿನ ವಿದ್ಯಾರ್ಥಿಗಳಿಗೆ ಇಲ್ಲ ಎಂಬುದು ಗಮನಾರ್ಹ ವಿಚಾರ. ಸ್ವತಃ ಸಿ.ಎ ತೇರ್ಗಡೆಯಾದವರೇ ಈ ಸಂಸ್ಥೆಯಲ್ಲಿತರಗತಿ ನಡೆಸುತ್ತಿರುವುದು ವಿದ್ಯಾರ್ಥಿಗಳ ಮತ್ತು ಹೆತ್ತವರ ಮೆಚ್ಚುಗೆಗೆ ಕಾರಣವಾಗಿದೆ. ಹಾಗೆಯೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಧಿಕ ಉದ್ಯೋಗಾವಕಾಶ ಇರುವುದರಿಂದ ಪದವಿ ಹಂತದಲ್ಲೇ ಬಿಕಾಂ ಜತೆಗೆ ಐಬಿಪಿಎಸ್ ಪರೀಕ್ಷಾ ತರಬೇತಿ ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ದೊರೆಯಲಿದೆ. ಹಾಗಾಗಿಯೇ ಇಂದು ಅಂಬಿಕಾ ಪದವಿ ಕಾಲೇಜು ವಾಣಿಜ್ಯ ವಿದ್ಯಾರ್ಥಿಗಳ ನೆಚ್ಚಿನ ತಾಣವೆನಿಸಿದೆ. ಇದರೊಂದಿಗೆ ಜನರಲ್ ಬಿ.ಕಾಂ ಕೂಡ ಇಲ್ಲಿ ಲಭ್ಯವಿದೆ.
ಬಿಎ ವಿಭಾಗದಲ್ಲಿ ಅತ್ಯಧಿಕ ಉದ್ಯೋಗಾವಕಾಶಗಳುಳ್ಳ ಪತ್ರಿಕೋದ್ಯಮ, ಐಚ್ಚಿಕ ಇಂಗ್ಲಿಷ್, ಮನಃಶಾಸ್ತ್ರದಂತಹ ವಿಷಯಗಳನ್ನು ಹೊಂದಿರುವುದು ಈ ವಿದ್ಯಾ ಸಂಸ್ಥೆಯ ವಿಶೇಷತೆ. ಇದಲ್ಲದೆ ತತ್ತ್ವಶಾಸ್ತ್ರ, ಐಚ್ಚಿಕ ಕನ್ನಡ ವಿಷಯಗಳೂ ಇಲ್ಲಿ ಲಭ್ಯ. ಜತೆಗೆ ಮಂಗಳೂರು ವಿಶ್ವವಿದ್ಯಾನಿಲಯದಡಿ ಸಂಸ್ಕೃತ ಐಚ್ಚಿಕ ವಿಷಯ ಬೋಧಿಸುವ ಬೆರಳೆಣಿಕೆಯ ಕಾಲೇಜುಗಳಲ್ಲಿ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯವೂ ಒಂದು ಎಂಬುದು ಉಲ್ಲೇಖಾರ್ಹ.
ಪುತ್ತೂರಿನಲ್ಲಿ ಮನಃಶಾಸ್ತ್ರ ಆರಂಭಿಸಿದ ಮೊದಲ ಕಾಲೇಜು:
ಪುತ್ತೂರು ಪರಿಸರದಲ್ಲಿ ಮನಃಶಾಸ್ತ್ರವನ್ನು ಪದವಿ ಹಂತದಲ್ಲಿ ಮೊದಲಿಗೆ ಪರಿಚಯಿಸಿದ ಕೀರ್ತಿ ಅಂಬಿಕಾ ಮಹಾವಿದ್ಯಾಲಯದ್ದು. ಹಾಗಾಗಿ ಈ ಪ್ರದೇಶದ ಮನಃಶಾಸ್ತ್ರ ಆಸಕ್ತ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಅಧ್ಯಯನ ಮಾಡುವುದಕ್ಕೆ ಅವಕಾಶ ದೊರಕಿದಂತಾಗಿದೆ. ಮನಃಶಾಸ್ತ್ರ ವಿಷಯಕ್ಕೆ ಇಂದು ಅಪಾರ ಬೇಡಿಕೆಯಿದ್ದು ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ತಯಾರಾಗುತ್ತಿಲ್ಲ ಎಂಬುದು ಗಮನಾರ್ಹ ಸಂಗತಿ. ಮನುಷ್ಯನ ಒತ್ತಡಯುಕ್ತ ಬದುಕಿನಿಂದಾಗಿ ಇಂದು ಆಪ್ತ ಸಲಹೆ ಕೇಂದ್ರಗಳಿಗೆ ಅಪಾರ ಬೇಡಿಕೆಯಿದೆ.ಪ್ರತಿಯೊಂದು ಆಸ್ಪತ್ರೆಯಲ್ಲೂ ಮನಃಶಾಸ್ತ್ರಜ್ಞರ ಅವಶ್ಯಕತೆ ಇದೆ. ನೂತನ ಶಿಕ್ಷಣ ನೀತಿಯನ್ವಯ ಮುಂದಿನ ದಿನಗಳಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಲ್ಲೂ ಮನಃಶಾಸ್ತ್ರಜ್ಞರು, ಆಪ್ತಸಮಾಲೋಚಕರು ಇರಲೇಬೇಕೆಂಬ ನಿಯಮರೂಪಿಸಲಾಗಿದೆ. ಹಾಗಾಗಿ ಇನ್ನು ಕೆಲವೇ ವರ್ಷಗಳಲ್ಲಿ ಒಮ್ಮಿಂದೊಮ್ಮೆಗೆ ಮನಃಶಾಸ್ತ್ರಓದಿದ ವಿದ್ಯಾರ್ಥಿಗಳಿಗೆ ಅಪಾರ ಬೇಡಿಕೆ ಸೃಷ್ಟಿಯಾಗಲಿದೆ.
ಮನಃಶಾಸ್ತ್ರಅಧ್ಯಯನದ ಪ್ರಯೋಜನಗಳು:
ಮನಃಶಾಸ್ತ್ರ ವಿಷಯವು ಉದ್ಯೋಗಾವಕಾಶದ ಆಚೆಗೂ ಅಧ್ಯಯನಾಕಾಂಕ್ಷಿಗೆ ಲಾಭತರುವಂಥಹದ್ದು. ಓದುವ ಸಂದರ್ಭದಲ್ಲಿಯೇ ಅನೇಕ ವ್ಯಕ್ತಿಗಳ ಒಡನಾಟ ಹಾಗೂ ಅವರ ಭಾವನೆಗೆ ಸ್ಪಂದಿಸುವಿಕೆ ಅಧ್ಯಯನದ ಭಾಗವಾಗಿದೊರಕುತ್ತದೆ. ಇದರಿಂದ ಸಮಾಜದಲ್ಲಿ ತನ್ನನ್ನು ತಾನು ವೃತ್ತಿಪರ ಮನಃಶಾಸ್ತ್ರಜ್ಞನಾಗಿ ರೂಪಿಸಿಕೊಳ್ಳುವುದಕ್ಕೆ ಅನುಕೂಲವೆನಿಸುತ್ತದೆ.ವಿವಿಧ ಆಸ್ಪತ್ರೆಗಳಲ್ಲಿ, ಕಾರ್ಪರೇಟ್ ಸಂಸ್ಥೆಗಳಲ್ಲಿ ಪದವಿ ಅಧ್ಯಯನಕಾಲದಲ್ಲಿಯೇ ಆಂತರಿಕತರಬೇತಿ ಹೊಂದುವ ಅಪೂರ್ವ ಅವಕಾಶವನ್ನು ಈ ವಿಷಯ ಒದಗಿಸಿಕೊಡುತ್ತದೆ. ಜತೆಗೆ ಸ್ವತಃ ಆಪ್ತ ಸಲಹಾ ಕೇಂದ್ರಗಳನ್ನು ಸ್ಥಾಪಿಸಿ ಸ್ವಾವಲಂಬಿ ಹಾಗೂ ಆಕರ್ಷಕ ವೃತ್ತಿಜೀವನ ನಡೆಸುವ ಅವಕಾಶಗಳೂ ಮುಕ್ತವಾಗಿವೆ. ಅಂತಹ ಅನೇಕ ಉದಾಹರಣೆಗಳು ನಮ್ಮ ಸುತ್ತಮುತ್ತಲು ಕಾಣಸಿಗುತ್ತವೆ. ರಾಜ್ಯದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಗಳಲ್ಲೂ ಮನಃಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ಅನೇಕರಿದ್ದಾರೆ ಎಂಬುದು ಗಮನಾರ್ಹ. ಪಿಯುಸಿಯಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಹೀಗೆ ಯಾವುದನ್ನು ಅಧ್ಯಯನ ನಡೆಸಿದರೂ ಅಂಬಿಕಾ ಕಾಲೇಜಿನಲ್ಲಿ ಮನಃಶಾಸ್ತ್ರವನ್ನು ಅಧ್ಯಯನ ಮಾಡುವುದಕ್ಕೆ ಮುಕ್ತ ಅವಕಾಶಗಳಿವೆ ಎಂಬುದು ಉಲ್ಲೇಖಾರ್ಹ.
ಮಂಗಳೂರು ವಿವಿಯಡಿ ತತ್ತ್ವಶಾಸ್ತ್ರ ಬೋಧಿಸುತ್ತಿರುವ ಏಕೈಕ ಕಾಲೇಜು:
ಭಾರತೀಯ ತತ್ತ್ವಜ್ಞಾನವನ್ನು ಎಳೆಯ ಮನಸ್ಸುಗಳಲ್ಲಿ ತುಂಬಿ ಬೌದ್ಧಿಕ ಶ್ರೀಮಂತ ಸಮಾಜವನ್ನು ರೂಪಿಸುವ ಕನಸಿನೊಂದಿಗೆ ಅಂಬಿಕಾ ಮಹಾವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿಯೇ ಪದವಿ ಹಂತದ ಬಿಎ ವಿಭಾಗದಲ್ಲಿ ಇನ್ನಿತರ ಐಚ್ಚಿಕ ವಿಷಯಗಳೊಂದಿಗೆ ತತ್ತ್ವಶಾಸ್ತ್ರವನ್ನೂ ಒಂದು ಆಯ್ಕೆಯಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಈ ಮಧ್ಯೆ, ಮನಃಶಾಸ್ತ್ರ ಹಾಗೂ ತತ್ತ್ವಶಾಸ್ತ್ರವನ್ನು ಜತೆಯಾಗಿ ಅಧ್ಯಯನ ಮಾಡಿದವರು ಅತ್ಯುತ್ಕೃಷ್ಟ ಮನಃಶಾಸ್ತ್ರಜ್ಞರಾಗಿ ಹೊರಹೊಮ್ಮುವುದಕ್ಕೆ ಸಾಧ್ಯವಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದಡಿ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳಲ್ಲಿ ತತ್ತ್ವಶಾಸ್ತ್ರ ಬೋಧಿಸುತ್ತಿರುವ ಏಕೈಕ ಕಾಲೇಜೆಂಬ ಹೆಗ್ಗಳಿಕೆ ಅಂಬಿಕಾ ಮಹಾವಿದ್ಯಾಲಯದ್ದು.
ಉಚಿತ ಶಿಕ್ಷಣ:
ಭಾರತೀಯ ತತ್ವಶಾಸ್ತ್ರದಲ್ಲಿ ಜ್ಞಾನರಾಶಿಯೇ ಅಡಗಿದ್ದು ಅದನ್ನು ಎಳೆಯ ಮನಸ್ಸುಗಳಿಗೆ ಉಣಬಡಿಸುವಕಾರ್ಯವನ್ನು ಮಾಡಬೇಕಾದ್ದು ಶಿಕ್ಷಣ ಸಂಸ್ಥೆಗಳ ಜವಾಬ್ಧಾರಿ ಎಂಬ ಆಲೋಚನೆಯಡಿ ತತ್ವಶಾಸ್ತ್ರವನ್ನು ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಭಾರತೀಯ ತತ್ವಗಳಲ್ಲಡಗಿರುವ ಜ್ಞಾನದೆಡೆಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವದೃಷ್ಟಿಯಿಂದ ತತ್ವಶಾಸ್ತ್ರ ವಿಷಯ ಸಂಯೋಜನೆ ಹೊಂದಿರುವ ಬಿಎ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ:
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು ಈ ಸಂಸ್ಥೆಯ ಮತ್ತೊಂದು ವೈಶಿಷ್ಟ್ಯ. ಇಂದು ಪದವಿ ಪೂರೈಸುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಮಾತ್ರ ಸರ್ಕಾರಿ ಉದ್ಯೋಗಗಳ ಬಾಗಿಲು ತೆರೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಂಬಿಕಾ ಕಾಲೇಜಿನಲ್ಲಿ ಪದವಿ ಓದುವ ವಿದ್ಯಾರ್ಥಿಗಳಿಗೆ ಮೊದಲ ವರ್ಷದಿಂದ ತೊಡಗಿ ಅಂತಿಮ ವರ್ಷದವರೆಗೂ ಎಸ್ಡಿಎ, ಎಫ್ಡಿಎ, ಪಿಡಿಒದಂತಹ ಪರೀಕ್ಷೆಗಳಿಗೆ ನಿರಂತರ ತರಬೇತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸರ್ಕಾರಿ ಉದ್ಯೋಗಕ್ಕೆ ಕಳುಹಿಸುವ ಇರಾದೆ ಈ ಶಿಕ್ಷಣ ಸಂಸ್ಥೆಯದ್ದು.
ವಿಶೇಷ ಆಕರ್ಷಣೆಯಾಗಿ ಅನುಪಮ ಟಿವಿ:
ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುನ್ನಡೆಸುತ್ತಿರುವ ಅನುಪಮ ಟಿವಿ ಎಂಬ ಯೂಟ್ಯೂಬ್ ವಾಹಿನಿ ಇದೀಗ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಟಿವಿ ಪತ್ರಿಕೋದ್ಯಮದ ಅರಿವನ್ನು ಮೂಡಿಸುವ ನೆಲೆಯಲ್ಲಿ ಈ ವಾಹಿನಿಯನ್ನು ಆರಂಭಿಸಲಾಗಿದೆ. ಆಂಕರಿಂಗ್, ಕ್ಯಾಮರಾ ನಿರ್ವಹಣೆ, ವೀಡಿಯೋ ಎಡಿಟಿಂಗ್, ಸ್ಕ್ರಿಪ್ಟ್ ರೈಟಿಂಗ್, ವಾಯ್ಸ್ಓವರ್ ಮೊದಲಾದ ವಿಷಯಗಳನ್ನು ಈ ಟಿವಿ ವಾಹಿನಿ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದೆ. ಈಗಾಗಲೇ ವಿಭಾಗದ ವಿದ್ಯಾರ್ಥಿಗಳು ಈ ವಾಹಿನಿಯ ಮೂಲಕ ಮನೆಮಾತಾಗುತ್ತಿದ್ದಾರೆ.
ಸುದರ್ಶನ ಮಾಸಪತ್ರಿಕೆ:
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಪತ್ರಿಕೋದ್ಯಮ ವಿಭಾಗ ಹೊರತರುತ್ತಿರುವ ಸುದರ್ಶನ ಎಂಬ ಹೆಸರಿನ ಮಾಸಪತ್ರಿಕೆ ವಿದ್ಯಾರ್ಥಿಗಳಿಗೆ ಬರವಣಿಗೆಯ ಕಲೆಯನ್ನು ಕಲಿಸಿಕೊಡುತ್ತಿದೆ. ಪತ್ರಿಕೊದ್ಯಮದಲ್ಲಿ ಉದ್ಯೋಗ ಕಂಡುಕೊಳ್ಳುವುದಕ್ಕೆ ಭಾಷೆಯ ಮೇಲಿನ ಹಿಡಿತದ ಅಗತ್ಯ ಇರುವುದರಿಂದ ಸ್ವತಃ ವಿಭಾಗದಿಂದಲೇ 32 ಪುಟಗಳ ಸುಂದರವಾದ ಮಾಸ ಪತ್ರಿಕೆಯನ್ನು ಹೊರತರಲಾಗುತ್ತಿದೆ. ಸುಮಾರು ಒಂದು ಸಾವಿರ ಪ್ರತಿಗಳ ಪ್ರಸಾರವನ್ನು ಈ ಮಾಸಪತ್ರಿಕೆ ಹೊಂದಿದೆ ಎಂಬುದು ಗಮನಾರ್ಹ.
ಅಭಿನವ ವಾರಪತ್ರಿಕೆ:
ವಿದ್ಯಾರ್ಥಿಗಳಲ್ಲಿ ವರದಿಗಾರಿಕೆ, ಬರವಣಿಗೆಯಂತಹ ಕಲೆಯನ್ನು ತುಂಬುವ ನೆಲೆಯಲ್ಲಿ, ಪುಟ ವಿನ್ಯಾಸದಕಲ್ಪನೆತರುವಲ್ಲಿ ಅಭಿನವ ವಾರಪತ್ರಿಕೆ ಕೆಲಸ ಮಾಡುತ್ತಿದೆ. ಪ್ರತಿವಾರ ವಿದ್ಯಾರ್ಥಿಗಳೇ ರೂಪಿಸುವ ಈ ಪತ್ರಿಕೆ ವಿದ್ಯಾರ್ಥಿಗಳಲ್ಲಿ ವೃತ್ತಿಪರತೆಯನ್ನು ಬೆಳೆಸುತ್ತಿದೆ.
ಭಾರತೀಯ ಕಾಲಗಣನೆ-ಪಂಚಾಂಗ ಪದ್ಧತಿ:
ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಭಾರತೀಯಪಂಚಾಂಗ ಪದ್ಧತಿಯ ಅರಿವನ್ನು ಒಡಮೂಡಿಸಲಾಗುತ್ತಿದೆ. ಹಾಗಾಗಿ ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಭಾರತೀಯ ದಿನಾಂಕವನ್ನು ಗುರುತಿಸುವ, ವಿಶೇಷತೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮೂಡಿಬರುತ್ತಿದೆ. ಇದರೊಂದಿಗೆ ಭಗವದ್ಗೀತೆ ಪಠಣ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮದಂತಹ ಪಠಣಗಳು, ಯೋಗ ತರಬೇತಿಗಳು ಇಲ್ಲಿ ನಿರಂತರವಾಗಿ ಸಾಗಿಬರುತ್ತಿವೆ.
ಪುತ್ತೂರು ನಗರದಿಂದ ಕಾಲ್ನಡಿಗೆಯ ದೂರದಲ್ಲಿರುವ ಬಪ್ಪಳಿಗೆಯ ಪ್ರಶಾಂತ ವಾತಾವರಣದಲ್ಲಿ ಈ ಶಿಕ್ಷಣ ಸಂಸ್ಥೆ ತಲೆಎತ್ತಿ ನಿಂತಿದ್ದು, ಈ ಸಂಸ್ಥೆಯ ಗುಣಮಟ್ಟ, ಇಲ್ಲಿರುವ ಅನುಭವೀ ಶಿಕ್ಷಕವೃಂದ, ವಿದ್ಯಾರ್ಥಿಗಳಿಗಿರುವ ವಿವಿಧ ಸವಲತ್ತುಗಳು, ಗುಣಮಟ್ಟದ ಆಹಾರದ ಜತೆಗೆ ಉತ್ಕೃಷ್ಟ ಹಾಸ್ಟೆಲ್ ವ್ಯವಸ್ಥೆ, ಅತ್ಯುತ್ತಮ ಗ್ರಂಥಾಲಯವೇ ಮೊದಲಾದ ಅನೇಕ ಸಂಗತಿಗಳು ಸಂಸ್ಥೆಯ ವಿಶೇಷತೆಗಳೆನಿಸಿವೆ. ಹಾಗಾಗಿಯೇ ಅನೇಕ ವಿದ್ಯಾರ್ಥಿಗಳು ಅದಾಗಲೇ ಈ ಸಂಸ್ಥೆಗೆ ದಾಖಲಾತಿ ಬಯಸಿ ಕಾಲೇಜನ್ನು ಸಂಪರ್ಕಿಸುತ್ತಿದ್ದಾರೆ. ಕಾಲೇಜಿನಲ್ಲಿ ನಿಗದಿತವಾದ ಕೆಲವು ಅವಕಾಶಗಳಷ್ಟೇ ಇದ್ದು, ಆಸಕ್ತ ವಿದ್ಯಾರ್ಥಿಗಳು ತಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ :9448835488/ 9449102082
ಪುತ್ತೂರಿನ ನಟ್ಟೋಜ ಫೌಂಡೇಶನ್ಟ್ರಸ್ಟ್ ಮುನ್ನಡೆಸುತ್ತಿರುವ ರಾಜ್ಯದ ಹೆಮ್ಮೆಯ ಶಿಕ್ಷಣ ಸಂಸ್ಥೆಗಳು
1. ಅಂಬಿಕಾ ವಿದ್ಯಾಲಯ (ಸಿಬಿಎಸ್ಇ)
2. ಅಂಬಿಕಾ ಪದವಿಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ
3. ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯ, ಬಪ್ಪಳಿಗೆ
4. ಅಂಬಿಕಾ ಪದವಿ ಮಹಾವಿದ್ಯಾಲಯ, ಬಪ್ಪಳಿಗೆ
ಅಂಬಿಕಾ ಮಹಾವಿದ್ಯಾಲಯದಲ್ಲಿ ಲಭ್ಯಇರುವ ಕೋರ್ಸ್ಗಳು
ಬಿ.ಎ
ಬಿಕಾಂ ಜನರಲ್
ಬಿ.ಕಾಂ ಇಂಟಗ್ರೇಟೆಡ್ (ಸಿಎ/ಐಬಿಪಿಎಸ್)
ಅತ್ಯಂತ ಕಡಿಮೆ ಶುಲ್ಕ:
ಅಂಬಿಕಾ ಮಹಾವಿದ್ಯಾಲಯ ತತ್ತ್ವಶಾಸ್ತ್ರವನ್ನು ಒಂದು ವಿಷಯವಾಗಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದರೆ ತತ್ತ್ವಶಾಸ್ತ್ರಕ್ಕಿಂತ ಹೊರತಾದ ವಿದ್ಯಾರ್ಥಿಗಳಿಗೆ ಮತ್ತು ಕೋರ್ಸ್ಗಳಿಗೆ ಕೂಡ ಅತ್ಯಂತಕಡಿಮೆ ಶುಲ್ಕವನ್ನು ವಿಧಿಸುತ್ತಿದೆ. ಬಡ ವಿದ್ಯಾರ್ಥಿಗಳ ಕೈಗೆಟಕುವ ಶುಲ್ಕವನ್ನಷ್ಟೇ ವಿಧಿಸುತ್ತಿರುವುದು ಹೆತ್ತವರಿಗೆ ಸಂತಸತಂದಿದೆ. ‘ಇಷ್ಟು ಕಡಿಮೆಯಾ’ ಎಂದು ಉದ್ಘಾರಿಸುವಷ್ಟರ ಮಟ್ಟಿಗೆ ಕಡಿಮೆ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆದುಕೊಳ್ಳಲಾಗುತ್ತಿದೆ ಎಂಬುದು ಗಮನಾರ್ಹ.