
ಮೂಡುಬಿದಿರೆಯ ಅನೀಶ್ ಡಿ’ಸೋಜ ದೆಹಲಿ ಪ್ರವಾಸಕ್ಕೆ ಆಯ್ಕೆ
Saturday, January 25, 2025
ಮೂಡುಬಿದಿರೆ: ಸೋಲಾರ್ ಅಳವಡಿಕೆ ಯೋಜನೆಯಲ್ಲಿ ಮೆಸ್ಕಾಂ ಇಲಾಖೆಯಿಂದ ದೆಹಲಿ ಪ್ರವಾಸಕ್ಕೆ ದ.ಕ. ಜಿಲ್ಲೆಯಿಂದ ಮೂಡುಬಿದಿರೆಯ ಅನೀಶ್ ಡಿ’ಸೋಜ ಅವರು ಆಯ್ಕೆಯಾಗಿದ್ದಾರೆ.
ಜ.26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿರುವ ಜಿಲ್ಲೆಯ ಏಕೈಕ ಉದ್ಯಮಿ ಅನೀಶ್ ಅವರಾಗಿದ್ದಾರೆ.
ಬೆಳುವಾಯಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿರುವ ಅನೀಶ್ ಅವರು ಮೂಡುಬಿದಿರೆಯ ಪರ್ಫೆಕ್ಟ್ ಎಲೆಕ್ಟ್ರಿಕಲ್ಸ್ ಮಾಲಕರಾಗಿದ್ದಾರೆ.