94 ಸಿ ಅಡಿ ಎಲ್ಲಾ ಅರ್ಹರಿಗೂ ಹಕ್ಕು ಪತ್ರ ದೊರಕಿಸಿ ಕೊಡಲು ಬದ್ಧ: ಶಾಸಕ ಗಂಟಿಹೊಳೆ

94 ಸಿ ಅಡಿ ಎಲ್ಲಾ ಅರ್ಹರಿಗೂ ಹಕ್ಕು ಪತ್ರ ದೊರಕಿಸಿ ಕೊಡಲು ಬದ್ಧ: ಶಾಸಕ ಗಂಟಿಹೊಳೆ


ಕುಂದಾಪುರ: ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆದ ವಂಡ್ಸೆ ಹೋಬಳಿಯ ಗ್ರಾಮ ಗಳಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸ್ತವ್ಯದ ಮನೆ ಕಟ್ಟಿಕೊಂಡ ಅರ್ಹ 32 ಮಂದಿ ಫಲನುಭವಿಗಳಿಗೆ 94 ಸಿ ಅಡಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಕ್ಕುಪತ್ರವನ್ನು ವಿತರಿಸಿದರು. 

ನಂತರ ಮಾತನಾಡಿದ ಅವರು, ಸಾಕಷ್ಟು ವರ್ಷಗಳಿಂದ ವಿವಿಧ ಹಂತದ ಅಧಿಕಾರಿಗಳ ಬಳಿಯಲ್ಲಿ 94 ಸಿ ಅರ್ಜಿಗಳು ಸಮರ್ಪಕ ವಿಲೇವಾರಿ ಆಗದೇ ವಿಳಂಬವಾಗುತ್ತಿದ್ದರಿಂದ ಗ್ರಾಮೀಣ ಭಾಗದ ಬಡ ಕುಟುಂಬ ಗಳು ಸಂಕಷ್ಟ ಅನುಭವಿಸಿ ಬೇರೆ ಬೇರೆ ಸರಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇಂದು ಅಂತಹ 32 ಬಡ ಕುಟುಂಬ ಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ವಂಡ್ಸೆ ಹೋಬಳಿಯ ಬಾಕಿ ಉಳಿದ ಎಲ್ಲಾ ಅರ್ಹ ಬಡ ಕುಟುಂಬಗಳಿಗೂ 94 ಸಿ ಅಡಿ ಭೂಮಿಯ ಹಕ್ಕು ಪತ್ರ ಒದಗಿಸಲು ಬದ್ಧ ಎಂದು ಹೇಳಿದರು.

ತಹಸೀಲ್ದಾರ್  ಮಲ್ಲಿಕಾರ್ಜುನ್, ಉಪ ತಹಸೀಲ್ದಾರ್ ಪ್ರಕಾಶ್ , ಕಂದಾಯ ನಿರೀಕ್ಷಕ ರಾಘವೇಂದ್ರ, ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article