ಮಾ.29ರಂದು ಕೃತಕ ಅಯವಯ ವಿತರಣೆ

ಮಾ.29ರಂದು ಕೃತಕ ಅಯವಯ ವಿತರಣೆ

ಮಂಗಳೂರು: ಲಯನ್ಸ್ ಜಿಲ್ಲೆ 317 ಡಿ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ಸಹಯೋಗದಲ್ಲಿ ಮಾ. 29ರಂದು ಬೆಳಗ್ಗೆ 10ಕ್ಕೆ ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ 35 ಅರ್ಹ ವಿಕಲಚೇತನರಿಗೆ ಕೃತಕ ಅವಯವಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಲಯನ್ಸ್ ಲಿಂಬ್ ಸೆಂಟರ್ನ ನಿರ್ದೇಶಕ ಡಾ. ಎಂ. ಶಾಂತರಾಮ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜ, ಪೂರ್ವ ಲಯನ್ಸ್ ಜಿಲ್ಲಾ ಗವರ್ನರ್ಗಳಾದ ವಸಂತ್ ಕುಮಾರ್ ಶೆಟ್ಟಿ, ಸಂಜೀತ್ ಶೆಟ್ಟಿ ಭಾಗವಹಿಸುವರು ಎಂದು ಲಯನ್ಸ್ ಜಿಲ್ಲೆ 317 ಡಿ ಗವರ್ನರ್ ಭಾರತಿ ಬಿ.ಎಂ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಮೊಣಕಾಲಿನ ಕೆಳಗಿನ ಕೃತಕ ಅಂಗಕ್ಕೆ ತಲಾ 50,000 ರೂ. ಹಾಗೂ ಮೊಣಕಾಲಿನ ಮೇಲಿನ ಕೃತತ ಅಂಗಕ್ಕೆ ತಲಾ ಒಂದು ಲಕ್ಷ ರೂ. ವೆಚ್ಚ ತಗಲುತ್ತದೆ. ದ.ಕ. ಮತ್ತು ಉಡುಪಿ ಜಿಲ್ಲೆಯಿಂದ ಅರ್ಜಿ ಬಂದಿದ್ದು, ಮೊದಲ ಆದ್ಯತೆ ನಿಯಮದಂತೆ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ  ಎಂದರು.

ಪ್ರಮುಖರಾದ ಗೀತಾ ರಾವ್, ಡಾ. ಸುರೇಶ್, ಮಂಗಳುರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article