ಎಐಟಿಯುಸಿ ಮುಂದಾಳು ಬಿ. ನಾರಾಯಣ ನಿಧನ

ಎಐಟಿಯುಸಿ ಮುಂದಾಳು ಬಿ. ನಾರಾಯಣ ನಿಧನ


ಮಂಗಳೂರು: ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ದಕ್ಷಿಣ ಕನ್ನಡ ಮತ್ತು ಉಡುಪಿ ಸಮಿತಿಯ ಸದಸ್ಯ ಬಿ. ನಾರಾಯಣ (65) ಮಾ.10 ರಂದು ಬೆಳಗ್ಗೆ ಹೃದಯಘಾದಿಂದ ನಿಧನರಾದರು. 

ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕಾರ್ಮಿಕ ವರ್ಗದಿಂದ ಬಂದ ನಾರಾಯಣ ಅವರು ತನ್ನ ಬಾಲ್ಯದಿಂದಲೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಗಣೇಶ ಬೀಡಿ ಕಂಪೆನಿಯಲ್ಲಿ ಉದ್ಯೋಗಿಯಾಗಿ ಸೇರಿದ ಇವರು ತಮ್ಮ ಉತ್ತಮ ಕಾರ್ಯ ನಿರ್ವಹಣೆಯಿಂದ ಪಾರ್ಟನರ್ ಆಗಿ ನಿವೃತ್ತಿ ಹೊಂದಿದ್ದರು. ಎಐಟಿಯುಸಿ ನೇತೃತ್ವದ ಗಣೇಶ ಬೀಡಿ ನೌಕರರ ಸಂಘದಲ್ಲಿ ಸಕ್ರಿಯವಾಗಿದ್ದ ಇವರು ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಕರ್ನಾಟಕ ರಾಜ್ಯ ಬೀಡಿ ವರ್ಕರ‍್ಸ್ ಫೆಡರೇಷನ್‌ನ ಉಪಾಧ್ಯಕ್ಷರಾಗಿ, ಸಿಪಿಐ ಸದಸ್ಯರಾಗಿ, ರಾಜಕೀಯದಲ್ಲೂ ಸಕ್ರಿರಾಗಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ನಾರಾಯಣ ಅವರು ತನ್ನ ಊರಾದ ಮಾರಿಪಳ್ಳ ಅಲ್ಲದೆ ಫರಂಗಿಪೇಟೆ, ಬಿ.ಸಿ. ರೋಡ್, ಬಂಟ್ವಾಳದಲ್ಲೂ ಜನಪ್ರಿಯರಾಗಿದ್ದರು.

ಮೃತರು ನಿಧನಕ್ಕೆ ಗಣೇಶ ಬೀಡಿ ನೌಕರರ ಸಂಘ, ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ಸಂತಾಪ ಸೂಚಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article