ಶುಭ ಕೆ.ಹೆಚ್. ಅವರಿಗೆ 'ವೀರ ವನಿತೆ ಪ್ರಶಸ್ತಿ

ಶುಭ ಕೆ.ಹೆಚ್. ಅವರಿಗೆ 'ವೀರ ವನಿತೆ ಪ್ರಶಸ್ತಿ


ಮಂಗಳೂರು/ಬೆಂಗಳೂರು: ಮಾ.8 ರಂದು ಬೆಂಗಳೂರಿನ ಸದಾಶಿವ ನಗರದಲ್ಲಿ ನಡೆದ ಪ್ರಸಿದ್ಧ 'ಚಿತ್ರಸಂತೆ' ಸಂಸ್ಥೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಶುಭ ಕೆ.ಹೆಚ್. ಅವರು ಮಾಸ್ಟರ್ ಅಥ್ಲೆಟಿಕ್ಸ್  ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಾಧನೆಗಾಗಿ ಇವರಿಗೆ 'ವೀರ ವನಿತೆ ಪ್ರಶಸ್ತಿ-2025' ಪ್ರಶಸ್ತಿಯನ್ನು ನೀಡಿ ಗೌರವಿಸಿತು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಚಲನಚಿತ್ರ ರಂಗದ ಖ್ಯಾತ ಚಿತ್ರ ನಟಿ ಡಾ. ಪ್ರಿಯಾಂಕಾ ಉಪೇಂದ್ರ ಹಾಗೂ ಜ್ಯೋತಿಷಿ ಡಾ. ದಿನೇಶ್ ಗುರೂಜಿ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article