
ಹಣ ಗಳಿಸುವ ಪಾಟ್೯ಟೈಮ್ ಜಾಬ್ ನೆಪದಲ್ಲಿ ಮೋಸ
ಬಂಟ್ವಾಳ: ರೆಸ್ಟೋರೆಂಟ್, ಹೋಟೆಲ್ಗಳಿಗೆ ರಿವಿವ್ಯೂ ಕೊಟ್ಟು 5 ಸ್ಟಾರ್ ನೀಡಿ ಸ್ಕ್ರೀನ್ ಶಾಟ್ ಕಳುಹಿಸಿ ಹಣ ಗಳಿಸುವ ಪಾಟ್೯ಟೈಮ್ ಜಾಬ್ ನೆಪದಲ್ಲಿ ಬಂಟ್ವಾಳ ತಾಲೂಕಿನ ವೀರಕಂಬಗ್ರಾಮದ ವ್ಯಕ್ತಿಯೋರ್ವರು ಹಣ ಕಳೆದುಕೊಂಡ ಘಟನೆ ನಡೆದಿದೆ.
ಇಲ್ಲಿನ ರಾಜೇಶ್ ಆಚಾರ್ಯ ಎಂಬವರು ಹಣ ಕಳೆದುಕೊಂಡವರಾಗಿದ್ದು, ಈ ಬಗ್ಗೆ ಅವರು ದ.ಕ. ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಅಪರಿಚಿತ ನಂಬರಿನಿಂದ ಬಂದಿದ್ದ ಗೂಗಲ್ ಮ್ಯಾಪ್ನ ಹೋಟಲೊಂದರ ಲಿಂಕ್ಗೆ ರಿವಿವ್ಯೂ ಕೊಟ್ಟು ೫ ಸ್ಟಾರ್ ನೀಡಿ ಕಮೆಂಟ್ ಮಾಡಿ ಸ್ಕ್ರೀನ್ ಶಾಟನ್ನು ಅದೇ ನಂಬರ್ ಗೆ ಕಳುಹಿಸಿದ್ದರು.
ಬಳಿಕ ಅಪರಿಚಿತರು ವಿವಿಧ ಹೆಸರಿನಲ್ಲಿ ಚಾಟ್ ಮಾಡಿದ್ದಲ್ಲದೆ ನೀಡಲಾದ ಟಾಸ್ಕಗೆ ರಾಜೇಶ್ ಅವರು ತಮ್ಮ ಹಾಗೂ ಪತ್ನಿಯ ಖಾತೆಯಿಂದ ಅಪರಿಚಿತರ ಖಾತೆಗೆ ಹಂತ, ಹಂತವಾಗಿ ಹಣವನ್ನು ಕಳಿಸಿದ್ದರು. ಕೊನೆಗೆ 21 ಲಕ್ಷ ಹಣ ಟಾಸ್ಕ್ನಲ್ಲಿ ಬಂದಿರುವುದಾಗಿ ಟೆಲಿಗ್ರಾಂ ಗ್ರೂಪ್ನಲ್ಲಿ ತೋರಿಸಿದ್ದು ಅದನ್ನು ಡ್ರಾ ಮಾಡಲು 4.20 ಲಕ್ಷ ರೂ. ಟಾಕ್ಸ್ ಪಾವತಿಸಬೇಕೆಂದು ತಿಳಿಸಿದಾಗ ತಾವು ವಂಚನೆಗೊಳಗಾದ ವಿಚಾರ ಬಯಲಿಗೆ ಬಂದಿದೆ.
ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.