ಹೊಳೆ ಹೂಳಿನ ಸಮಸ್ಯೆಗೆ ಪರಿಹಾರ ಮರೀಚಿಕೆ: ಹೋರಾಟಕ್ಕೆ ತಯಾರಿ

ಹೊಳೆ ಹೂಳಿನ ಸಮಸ್ಯೆಗೆ ಪರಿಹಾರ ಮರೀಚಿಕೆ: ಹೋರಾಟಕ್ಕೆ ತಯಾರಿ

ಕುಂದಾಪುರ: ಕುಂದಾಪುರ ತಾಲೂಕು ಕುಂಭಾಶಿ, ತೆಕ್ಕಟ್ಟೆ ಪರಿಸರದಲ್ಲಿನ ಸಣ್ಣ ಹೊಳೆ ಹಾಗೂ ತೋಡುಗಳಲ್ಲಿ ಹೂಳು ತುಂಬಿ, ಮಳೆ ನೀರಿನ ಬೇಕಾಬಿಟ್ಟಿ ಹರಿವಿನಿಂದ ರೈತರು ಭಾರೀ ತೊಂದರೆಗೊಳಗಾಗಿದ್ದು, ಸಹನೆಯ ಕಟ್ಟೆ ಒಡೆಯುವ ಸಮಯ ಸನ್ನಿಹಿತವಾದಂತಿದೆ. ಹೂಳು ಸಮಸ್ಯೆಯಿಂದ ಹೈರಾಣಾದ ರೈತರು ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸಮಸ್ಯೆಗಳ ಪರಿಹಾರೊಪಾಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. 

ತೆಕ್ಕಟ್ಟೆಯಿಂದ ಆರಂಭಗೊಂಡು ಗಿಳಿಯಾರು, ಚಿತ್ರಪಾಡಿ ಮೂಲಕ ಕಾವಡಿ ತನಕ ಸಂಪರ್ಕ ಹೊಂದಿರುವ  ಸೂಲಡ್ಪು ಹೊಳೆಯ ಹೂಳಿನ ಸಮಸ್ಯೆ ಬಗೆಹರಿಯದಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹೋರಾಟ ನಡೆಸುವ ಸಲುವಾಗಿ ಸ್ಥಳೀಯರು ಕೋಟ ಮಾಂಗಲ್ಯ ಮಂದಿರದಲ್ಲಿ ಸೇರಿ ಚರ್ಚೆ ನಡೆಸಿದರು.

ಹೋರಾಟದ ಕುರಿತು ವಸಂತ್ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಳೆಯ ಸಮಸ್ಯೆಯಿಂದ ಪ್ರತಿ ವರ್ಷ ಕೃಷಿ ಬೆಳೆ ನಾಶವಾಗುತ್ತಿದೆ. ಕಾಮಗಾರಿಗಾಗಿ ಅನುದಾನ ಬಿಡುಗಡೆಯಾಗಿದೆ ಎನ್ನುವ ಮಾತು ಈ ಹಿಂದೆ ಕೇಳಿಬಂದಿತ್ತು. ಆದರೆ ಈ ವರ್ಷ ಕೂಡ ಮಳೆಗಾಲ ಹತ್ತಿರವಾಗುತ್ತಿದ್ದು ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್‍ಯವಾಗಿದೆ ಎಂದರು.  

ಸಭೆಯಲ್ಲಿ ಉಪಸ್ಥಿತರಿದ್ದ ರೈತರು ಹೋರಾಟ ನಡೆಸಲು ಕೈಜೋಡಿಸುವುದಾಗಿ ಭರವಸೆ ನೀಡಿದರು.

ಎ.22 ರಂದು ಈ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ಹೋರಾಟದ ರೂಪುರೇಷೆ ಸಿದ್ಧಪಡಿಸುವುದು ಎಂದು ತೀರ್ಮಾನಿಸಲಾಯಿತು. ಸ್ಥಳೀಯರಾದ ಶ್ಯಾಮ್‌ಸುಂದರ ನಾಯರಿ, ಕಾರ್ಕಡ ರಾಜು ಪೂಜಾರಿ, ಅಜಿತ್ ದೇವಾಡಿಗ ಕೋಟ, ಶೇಖರ್ ಜಿ., ಗಿರೀಶ್ ಬೆಟ್ಲಕ್ಕಿ, ಗಣೇಶ್ ಗಾಣಿಗ ಚಿತ್ರಪಾಡಿ, ಕಿರಣ್ ಕುಂದರ್ ಮೊದಲಾದವರು ಸಭೆಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article