
ಕವಿಪ್ರನಿನಿ ನೌಕರರ ಸಹಕಾರಿ ಸಂಘದ ಚುನಾವಣೆ
Friday, April 4, 2025
ಮಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಹಕಾರಿ ಸಂಘ ನಿಯಮಿತ (ರಿ.) ಇದರ 2025-26 ರಿಂದ ಮುಂದಿನ ಐದು ವರ್ಷಗಳಿಗೆ ಮಾ.30 ರಂದು ನಿಗದಿ ಪಡಿಸಿದ ಚುನಾವಣೆಯಲ್ಲಿ ಶಾಂತಾನಂದ ಶೆಟ್ಟಿ, ಕೆ. ಕರುಣಾಕರ ಶೆಟ್ಟಿ, ಲೋಕೇಶ ಪೂಜಾರಿ, ಪುತ್ತು ಜೆ., ಪರಮೇಶ್ವರ ಹೆಗಡೆ, ಜಾನ್ ಬ್ಯಾಪಿಸ್ಟ್ ಡಿ’ಸೋಜ, ರಾಜೇಶ ಬಿ., ಆಶಾ, ವನಿತಾ ಕೆ., ಸಿದ್ದರಾಜು, ಷಣ್ಮುಖಪ್ಪ ಬಾವಿ, ಶಿವರಾಜ್ ಎಂ., ಕಿಟ್ಟಣ್ಣ ಶೆಟ್ಟಿ, ಪ್ರಭಾತ್ ಜೋಶಿ, ಸದಾಶಿವ ಕೆ. ಇವರುಗಳು ಮಂಡಳಿಯ ನಿರ್ದೇಶಕರುಗಳಾಗಿ ಅವಿರೋಧವಾಗಿ ಚುನಾಯಿತರಾದರು.
ಏ.2 ರಂದು ನಡೆದ ಚುನಾವಣೆಯಲ್ಲಿ ಕವಿಪ್ರನಿನಿ ನೌಕರರ ಸಹಕಾರಿ ಸಂಘ ನಿಯಮಿತ ಇದರ 5 ವರ್ಷದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಾಂತಾನಂದ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಪುತ್ತು ಜೆ. ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.