ಡಾ. ಬಿ.ಆರ್ ಅಂಬೇಡ್ಕರ್ ಅವರ ಆದರ್ಶಗಳು ಸರ್ವರಿಗೂ ಮಾದರಿ: ಕೆ.ಎಂ. ಮಹಾದೇವ ಸ್ಪಾಮಿ

ಡಾ. ಬಿ.ಆರ್ ಅಂಬೇಡ್ಕರ್ ಅವರ ಆದರ್ಶಗಳು ಸರ್ವರಿಗೂ ಮಾದರಿ: ಕೆ.ಎಂ. ಮಹಾದೇವ ಸ್ಪಾಮಿ


ಮ೦ಗಳೂರು: ಸಾಮಾಜಿಕ ಸಮಾನತೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಸಮಾಜದ ಕಲ್ಯಾಣಕ್ಕಾಗಿ, ವಿಶೇಷವಾಗಿ ಮಹಿಳೆಯರು ಮತ್ತು ದೀನದಲಿತರ ಉನ್ನತಿಗಾಗಿ ಶ್ರಮಿಸಿದ ಕ್ರಾ೦ತಿ ಪುರುಷರು. ಅವರ ಆದರ್ಶಗಳು ಎಲ್ಲ ವರ್ಗದ ಜನರಿಗೂ ಮಾದರಿಯಾಗಿವೆ ಎಂದು ಮೆಸ್ಕಾಂ ತಾಂತ್ರಿಕ ನಿರ್ದೇಶಕ ಕೆ.ಎಂ. ಮಹಾದೇವ ಸ್ಪಾಮಿ ಪ್ರಸನ್ನ ಹೇಳಿದರು.

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಅ೦ಗವಾಗಿ ಮ೦ಗಳೂರಿನ ಮೆಸ್ಕಾಂ ಕಾಪೋ೯ರೆಟ್ ಕಚೇರಿಯಲ್ಲಿ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕ೦ಪೆನಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ವಗ೯ಗಳ ಕಲ್ಯಾಣ ಸ೦ಸ್ಥೆ ಮ೦ಗಳೂರು ಸಹಭಾಗಿತ್ವದೊ೦ದಿಗೆ ಸೋಮವಾರ ಅಯೋಜಿಸಿದ್ದ ಕಾಯ೯ಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ನಮನ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಡಾ. ಅಂಬೇಡ್ಕರ್ ಅವರ ಕೊಡುಗೆಗಳು ವಿಶಾಲ ಮತ್ತು ವೈವಿಧ್ಯಮಯವಾಗಿದ್ದು, ಅವರ ತತ್ವ, ವಿಚಾರಧಾರೆಗಳು ನಮಗೆ ದಾರಿದೀಪವಾಗಲಿ ಎ೦ದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಚಿ೦ತಕ ಹಾಗೂ ಕನಾ೯ಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಡಾ. ಕಾಳೇಗೌಡ ನಾಗವಾರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಮಾನವೀಯತೆ, ನ್ಯಾಯ ಮತ್ತು ಘನತೆಯ ತತ್ವಗಳ ಆಧಾರಿತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದರು ಎ೦ದರು. 

ಸಾಮಾಜಿಕ ನ್ಯಾಯ, ಮಹಿಳಾ ಶಿಕ್ಷಣದ ಪ್ರಬಲ ಪ್ರತಿಪಾದಕರಾಗಿದ್ದ ಅವರು ಜ್ಞಾನದ ಆಗರವಾಗಿದ್ದರು. ಅದುದರಿ೦ದಲೇ ಅವರು ಹುಟ್ಟಿದ ದಿನವನ್ನು ವಿಶ್ವ ಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ ಎಂದ ಅವರು ಮ೦ಗಳೂರಿನಲ್ಲಿ ಕುದ್ಮುಲ್ ರ೦ಗರಾವ್ ಅವರು ಕೂಡಾ ದೀನದಲಿತರ ಉದ್ದಾರಕ್ಕಾಗಿ ಶ್ರಮಿಸಿದ ಮಾಹಾನ್ ಮಾನವತಾವಾದಿಯಾಗಿದ್ದರು ಎ೦ದರು.

ಮುಖ್ಯ ಅಥಿ೯ಕ ಅಧಿಕಾರಿ ಬಿ. ಹರಿಶ್ಚಂದ್ರ, ಅಥಿ೯ಕ ಸಲಹೆಗಾರ ಮುರಳೀಧರ ನಾಯಕ್, ಪ್ರಧಾನ ವ್ಯವಸ್ಥಾಪಕ ಹರೀಶ್ ಕುಮಾರ್, ಮುಖ್ಯ ಇ೦ಜಿನಿಯರ್ ರವಿಕಾ೦ತ್  ಆರ್. ಕಾಮತ್, ಮೆಸ್ಕಾ೦ ಜಾಗೃತದಳ ಪೊಲೀಸ್ ಉಪಅಧೀಕ್ಷಕ ಟಿ.ಆರ್. ಜೈಶ೦ಕರ್, ಕವಿಪ್ರನಿನಿ ಅಧೀಕ್ಷಕ ಇಂಜಿನಿಯರ್ ಚೈತನ್ಯ, ಕವಿಪ್ರನಿನಿ ಯೂನಿಯನ್‌ಗಳ ಪದಾಧಿಕಾರಿಗಳಾದ ತೇಜಸ್ವಿ ಬಿ.ಆರ್., ಎಚ್.ಎಸ್. ಗುರುಮೂತಿ೯, ನಿತೀಶ್, ಪುಷ್ಪರಾಜ್ ಉಪಸ್ಥಿತರಿದ್ದರು. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವಗ೯ಗಳ ಕಲ್ಯಾಣ ಸ೦ಸ್ಥೆ ಮ೦ಗಳೂರು ಉಪಾಧ್ಯಕ್ಷ ಡಿ. ಶ್ರೀನಿವಾಸಪ್ಪ ಪ್ರಸ್ತಾವನೆಗೈದರು. ಸಾವ೯ಜನಿಕ ಸ೦ಪಕ೯ ಅಧಿಕಾರಿ ವಸ೦ತ ಶೆಟ್ಟಿ ನಿರೂಪಿಸಿದರು. ರಘುರಾಮ ಶೆಟ್ಟಿ ವ೦ದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article