
ದೀಪಗಳಿಂದ ಭಾರತ ನಕ್ಷೆಯಲ್ಲಿ ಮೂಡಿದ ಶಿಬಿರ ಜ್ಯೋತಿ
Monday, April 28, 2025
ಮಂಗಳೂರು: ಇಲ್ಲಿನ ಶಕ್ತಿನಗರದ ನಾಲ್ಯಪದವಿನ ಕುವೆಂಪು ಶತಮಾನೋತ್ಸವ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏ.20 ರಿಂದ 26 ರವರೆಗೆ ನಡೆದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಕೊನೆಯ ದಿನ ರಾತ್ರಿ 1 ಗಂಟೆಯ ಹೊತ್ತಿದೆ ಎನ್ಎಸ್ಎಸ್ ಯೋಜನಾಧಿಕಾರಿಗಳೊಂದಿಗೆ 110 ಸ್ವಯಂಸೇವಕರುಗಳು ಕತ್ತಲಲ್ಲಿ ಭಾರತದ ನಕ್ಷೆಯ ಮೇಲೆ ದೀಪಗಳನ್ನು ಹಚ್ಚುವ ಮೂಲಕ ಶಿಬಿರ ಜ್ಯೋತಿಯನ್ನು ಬೆಳಗಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಡಾ. ಲೋಕೇಶ್ನಾಥ್ ಬಿ., ಡಾ. ಮೋಹನ್ದಾಸ್, ಶಾಂತಿ, ಸಹ-ಯೋಜನಾಧಿಕಾರಿಗಳಾದ ದೀರಾಜ್ ಕುಮಾರ್, ಅಭಿಷೇಕ್ ಹೆಚ್.ಎಸ್., ಸ್ವಯಂಸೇವಕರುಗಳು ಇದ್ದರು.