
ಕಾಶ್ಮೀರದಲ್ಲಿ ಉಗ್ರರ ದಾಳಿ: ಅಮಾನವೀಯ ಕೃತ್ಯ, ಖಂಡನಿಯ: ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ವಿರುದ್ಧ ಆಕ್ರೋಶ
ಮಂಗಳೂರು: ಕಾಶ್ಮೀರದ ಪಹಾಮ್ ಬಳಿ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿ ಅತ್ಯಂತ ಖಂಡನೀಯವಾಗಿದ್ದು, ಈ ದಾಳಿಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೆ ನೇರ ಕಾರಣ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಹಲ್ಯಾಮ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 27ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಇದರಲ್ಲಿ ಕನ್ನಡಿಗರು ಸೇರಿದ್ದು, ಈ ಘಟನೆಗೆ ಕೇಂದ್ರ ಸರ್ಕಾರವೇ ಹೊಣೆ. ಈ ಘಟನೆಗೆ ಭದ್ರಾತ ವೈಫಲ್ಯ ಕಾರಣವಾಗಿರುವುದರಿಂದ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು.
ಈ ದಾಳಿಯಿಂದ ಸರಕಾರ ಕಾಶ್ಮೀರ ಭದ್ರತೆ ಬಗ್ಗೆ ಇಷ್ಟು ದಿನ ಸುಳ್ಳು ಹೇಳತಿತ್ತು ಎಂದು ಬಹಿರಂಗಗೊಂಡಿದೆ. ದಾಳಿಯಲ್ಲಿ ಮೃತ ಪಟ್ಟ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾಶ್ಮೀರದಲ್ಲಿ 370 ಆಕ್ಟ್ ಹಿಂಪಡೆದಿದ್ದರಿಂದ ಯಾವುದೇ ರೀತಿಯ ಘಟನೆಗಳು ನಡೆಯುತ್ತಿಲ್ಲವೆಂದು ಇದೀಗ ಉಗ್ರರ ದಾಳಿ ನಡೆಸಿದ್ದು, ಇದರಿಂದ ಕೇಂದ್ರ ಸರ್ಕಾರದ ಜನರ ಸುರಕ್ಷತೆಯಲ್ಲಿ ಎಡವಿದೆ ಮತ್ತು ಕೇವಲ ಭಾಷಣಗಳ ಮೂಲಕ ಉಗ್ರವಾದವನ್ನು ತಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.