ಮೂಡುಬಿದಿರೆಯಲ್ಲಿ ನವ ಚೇತನ ಶಿಬಿರ ಉದ್ಘಾಟನೆ

ಮೂಡುಬಿದಿರೆಯಲ್ಲಿ ನವ ಚೇತನ ಶಿಬಿರ ಉದ್ಘಾಟನೆ


ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್(ರಿ), ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕ  ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ 5 ದಿನಗಳ ಕಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುವ ನವಚೇತನ ಶಿಬಿರವು ಮಂಗಳವಾರ  ಸಂಜೆ ಆರಂಭಗೊಂಡಿತು.


ಆರ್ಟ್ ಆಫ್ ಲಿವಿಂಗ್ ಯೋಗ ಶಿಕ್ಷಕಿ ಸುನಿತಾ ಉದಯ್, ನಿವೃತ್ತ  ಶಿಕ್ಷಕಿ ಪ್ರೇಮ ಎಸ್. ರಾವ್ ದೀಪ ಬೆಳಗುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. 


ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನ ನಾಯಕ್, ಮಾರ್ಗದರ್ಶಕಿ ಸುಮಲತಾ ಶೆಟ್ಟಿ, ಪ್ರಮುಖರಾದ ಅಮಿತಾ ಬನ್ನಡ್ಕ, ಸುಕನ್ಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಯೋಗ ಪ್ರಾಣಾಯಾಮ, ಧ್ಯಾನ, ಜ್ಞಾನ/ ಆಟಗಳು ಹಾಗೂ ತರಬೇತಿ ಐದು ದಿನದ ಶಿಬಿರದಲ್ಲಿ ನಡೆಯಲಿದೆ. ಸಾರಿಕ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

42 ಶಿಬಿರಾರ್ಥಿಗಳು  5 ದಿನಗಳು ನಡೆಯುವ ವಿಶೇಷ ಯೋಗ ಶಿಬಿರದಲ್ಲಿ ಭಾಗವಹಿಸಿ ಹೆಸರು ದಾಖಲಿಸಿದರು.

ಜವನೆರ್ ಬೆದ್ರ ಫೌಂಡೇಶನ್ (ರಿ)ಅಧ್ಯಕ್ಷ ಅಮರ್ ಕೋಟೆ, ಜವನೆರ್ ಬೆದ್ರ ಯುವ ಸಂಘಟನೆ ಸಂಚಾಲಕ ನಾರಾಯಣ ಪದುಮಲೆ, ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಬಿ. ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article