
ಅಗ್ನಿ ಶಾಮಕ ಸಪ್ತಾಹ: ಮೂಡುಬಿದಿರೆ ಸ.ಆ. ಕೇಂದ್ರದಲ್ಲಿ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ
Friday, April 25, 2025
ಮೂಡುಬಿದಿರೆ: ಅಗ್ನಿಶಾಮಕ ಸೇವಾ ಸಪ್ತಾಹದಂಗವಾಗಿ ತಾಲೂಕು ಅಗ್ನಿಶಾಮಕ ಇಲಾಖೆಯಿಂದ "ಅಗ್ನಿ ಸುರಕ್ಷಿತ ಭಾರತವನ್ನು ಹುಟ್ಟು ಹಾಕಲು ಒಂದಾಗೋಣ" ಎಂಬ ಧ್ಯೇಯ ವಾಕ್ಯದೊಂದಿಗೆ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ
ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿ ವಗ೯ದವರಿಗೆ ಅಗ್ನಿಶಮನದ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನಡೆಯಿತು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷತಾ ನಾಯಕ್, ಅಗ್ನಿಶಾಮಕ ದಳದ ಠಾಣಾಧಿಕಾರಿ ಶ್ರೀಪಾಲ್, ಸಹಾಯಕ ಠಾಣಾಧಿಕಾರಿ ಸುದರ್ಶನ್ ಈ ಸಂದರ್ಭದಲ್ಲಿದ್ದರು.