ವಕ್ಫ್‌ನ್ನು ಮುಂದಿಟ್ಟು ದೇಶ ಒಡೆದು ಆಳುವ ಕೆಲಸ: ಸುಧೀಕ್ ಕುಮಾರ್ ಮರೋಳ್ಳಿ

ವಕ್ಫ್‌ನ್ನು ಮುಂದಿಟ್ಟು ದೇಶ ಒಡೆದು ಆಳುವ ಕೆಲಸ: ಸುಧೀಕ್ ಕುಮಾರ್ ಮರೋಳ್ಳಿ


ಉಪ್ಪಿನಂಗಡಿ: ಕೇಂದ್ರ ಸರಕಾರ ಲೋಕಸಭೆಯಲ್ಲಿ ವಕ್ಫ್ ಮಸೂದೆ ತಿದ್ದುಪಡಿ ಕಾಯ್ದೆಯನ್ನು ಮಂಡಿ ಸುವ ಮೂಲಕ ಇಲ್ಲಿನ ಕಾರ್ಪೋರೇಟರ್ ಲೂಟಿಕೋರರಿಗೆ ಸಹಾಯ ಮಾಡಲು ಹೊರಟದ್ದು ಬಿಟ್ಟರೆ ಈ ಕಾಯ್ದೆಯಿಂದ ಬೇರೆ ಯಾರಿಗೂ ಲಾಭವಿಲ್ಲ. ಜನರಿಗೆ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿರುವ ಬಿಜೆಪಿ ಸರಕಾರ ಸಾಧನೆ ಶೂನ್ಯವಾಗಿದ್ದು, ಅದನ್ನು ಮತದಾರರು ಪ್ರಶ್ನಿಸಬಾರ ದೆಂದು ವಕ್ಫ್ ಆಸ್ತಿಯ ವಿಚಾರ ಮುಂದಿಟ್ಟುಕೊಂಡು ದೇಶವನ್ನು ಒಡೆದು ಆಳುವ ಕೆಲಸಕ್ಕೆ ಹೊರಟಿದೆ. ಮುಸ್ಲಿಮರ ಉದ್ಧಾರಕ್ಕೆ ಕೇಂದ್ರ ಸರಕಾರ ಹೊರಟಿದ್ದೆಯಾದಲ್ಲಿ ರಾಜೀಂದೆರ್ ಸಾಚಾರ್ ವರದಿಯನ್ನು ಜಾರಿಗೆ ತರಲಿ ಎಂದು ನ್ಯಾಯವಾದಿ, ಚಿಂತಕ ಸುಧೀಕ್ ಕುಮಾರ್ ಮರೋಳ್ಳಿ ತಿಳಿಸಿದರು. 

ಉಪ್ಪಿನಂಗಡಿಯ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಪರಿಸರದ ಸುಮಾರು 50ಕ್ಕೂ ಅಧಿಕ ಮಸೀದಿ, ಮದ್ರಸಗಳು ಹಾಗೂ ಸಂಘಟನೆಗಳ ಸಹಯೋಗದಲ್ಲಿ ಎ.15ರಂದು ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. 

ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಇಂದು ಕೋಮುವಾದಿ ಹಿಂದುತ್ವವಾದಿ ಶಕ್ತಿಗಳ ಜೊತೆಗೆ ಕೈಜೋಡಿಸಿಕೊಂಡು ಅದಾನಿ- ಅಂಬಾನಿಗಳಂತ ಕಾರ್ಪೋರೇಟರ್ಗಳು ನಮ್ಮ ದೇಶವಾಳ್ತ ಇದ್ದಾರೆ. ವಕ್ಫ್ ಮಸೂದೆ ತಿದ್ದುಪಡಿ ಕಾಯ್ದೆ ಮಂಡನೆ ಮಾಡಿರುವುದು ಇವರ ಈ ಕೋಟೆಯನ್ನು ಉಳಿಸಲು ಬೇಕಾಗಿ ಕೇಂದ್ರ ಸರಕಾರ ಉರುಳಿಸುವ ದಾಳ. ಇದರಲ್ಲಿ ದೇಶವನ್ನು ನುಂಗುವ ಕುತಂತ್ರ ಅಡಗಿದೆ. ನಮ್ಮ ದೇಶದ ರಾಜಕಾರಣದಲ್ಲಿ ಕೇಂದ್ರ ಬಿಂದುಗಳಾಗಿರುವುದು ಮುಸ್ಲಿ ಮರು. ಆದರೆ ಅವರೊಳಗೆ ಇರುವ ಹೊಂದಾಣಿಕೆಯ ಕೊರತೆಯನ್ನು ಬಳಸಿಕೊಂಡು ಬಿಜೆಪಿ ರಾಜಕೀಯ ಲಾಭ ಪಡೆಯುತ್ತಾ ಇದೆ. ಮುಸ್ಲಿಮರು ಒಂದಾಗಿ ನಿಂತ್ರೆ ಇಲ್ಲಿ ಬಿಜೆಪಿಯೂ ಇಲ್ಲ. ಮೋದಿಯೂ ಇಲ್ಲ. ಈ ಕಾಯ್ದೆ ಜಾರಿಯಿಂದ ಅಂಬಾನಿ-ಅದಾನಿಯಂತವರ ಆಸ್ತಿ ಹೆಚ್ಚಳವಾಗುವುದೇ ಹೊರತು ಈ ದೇಶದ ಬಡತನ ದೂರವಾಗಲು ಸಾಧ್ಯವಿಲ್ಲ. ಮುಸ್ಲಿಮರು ಇಲ್ಲಿನ ಮೂಲ ನಿವಾಸಿಯಾಗಿದ್ದು, ಅವರು ಈ ನೆಲದ ವಾರೀಸದಾರರು. ಬಿಜೆಪಿಯು ಅಧಿಕಾರಕ್ಕೆ ಬಂದ ಬಳಿಕ ಕೇವಲ ಮುಸ್ಲಿಮರು ಮಾತ್ರ ಅಲ್ಲ. ಈ ದೇಶದ 80 ಶೇ. ತಳವರ್ಗದವರು ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.

ಇಸಾಕ್ ಪುತ್ತೂರು ಮಾತನಾಡಿ, ಕೋಮುವಾದಿ ಶಕ್ತಿಗಳು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿವೆ. ಅವರು ಅಧಿಕಾರಕ್ಕೆ ಬಂದ ಬಳಿಕ ಕೋಮು ದ್ವೇಷ ಬಲಗೊಳ್ತಾ ಇದೆ. ಇದನ್ನು ಸೋಲಿಸಲು ದೇಶದ ಎಲ್ಲರೂ ಒಂದುಗೂಡಬೇಕಾಗಿದೆ. ವಕ್ಫ್ ಆಸ್ತಿಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸವು ನಡೆಯುತ್ತಿದ್ದು, ವಕ್ಫ್ ಭೂಮಿ ಅಂದರೆ ಅದು ಮುಸ್ಲಿಮರಿಗೆ ಸರಕಾರ ಕೊಟ್ಟ ಭೂಮಿಯಲ್ಲ. ನಮ್ಮ ಹಿರಿಯರು ಸ್ವಯ ಇಚ್ಛೆಯಿಂದ ಅಲ್ಲಾಹುನಿಗಾಗಿ ದಾನವಾಗಿ ನೀಡಿದ ಭೂಮಿ. ಇದರಲ್ಲಿ ವಕ್ಫ್ಗೆ ಭೂಮಿಯನ್ನು ಅಕ್ರಮವಾಗಿ ಸೇರಿಸಿಕೊಳ್ಳಲು, ಕಬಳಿಸಲು ಅವಕಾಶವಿಲ್ಲ. ಇಸ್ಲಾಂ ಅದನ್ನು ಒಪ್ಪಿಕೊಳ್ಳು ವುದಿಲ್ಲ. ಈ ಕಾಯ್ದೆಯ ಮೂಲಕ ವಕ್ಫ್ ಆಸ್ತಿಯನ್ನು ಕಬಳಿಸಿ ಉದ್ಯಮಿಗಳಿಗೆ ನೀಡುವ ಬದಲು ಈಗಾಗಲೇ ಕಬಳಿಕೆ ಆಗಿರುವ ವಕ್ಫ್ ಆಸ್ತಿಯನ್ನು ಸಂರಕ್ಷಿಸುವ ಕೆಲಸವಾಗಬೇಕು. ವಕ್ಫ್ ಕಮಿಟಿಗೆ ಮುಸ್ಲಿಮೇತರರನ್ನು ಸೇರಿಸಿಕೊಂಡು ಧರ್ಮದೊಳಗೆ ಹಸ್ತಕ್ಷೇಪ ಮಾಡುವ ಕೆಲಸ ಮಾಡುತ್ತಿದ್ದು, ಇದನ್ನು ನಾವೆಲ್ಲಾ ವಿರೋಧಿ ಸಬೇಕಾಗಿದೆ. ನ್ಯಾಯಯುತ, ಶಾಂತಿಯುತ ಪ್ರತಿಭಟನೆಯ ಮೂಲಕ ಹೋರಾಟ ನಡೆಸಬೇಕಿದೆ ಎಂದರು. 

ಎಸ್ಸೆಸ್ಸೆಫ್ ನೇತಾರ ಅಬ್ದುರ್ರಶೀದ್ ಝೈನಿ, ಇಕ್ಬಾಲ್ ಬಾಳಿಲ ಮಾತನಾಡಿದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾದ ಡಾ. ರಾಜಾರಾಂ ಕೆ.ಬಿ., ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ, ಮಾಜಿ ಸದಸ್ಯರಾದ ಎಂ.ಎಸ್. ಮಹಮ್ಮದ್, ಶಾಹುಲ್ ಹಮೀದ್ ಕರ್ವೇಳ್ ಜುಮಾ ಮಸೀದಿ ಖತೀಬ್ ಹಾದಿ ಅನಸ್ ತಂಙಳ್, ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹೆಚ್. ಯೂಸುಫ್ ಹಾಜಿ, ಪಂಚಾಯತ್ ಸದಸ್ಯರಾದ ಯು.ಟಿ. ತೌಸೀಫ್, ಅಬ್ದುಲ್ ರಶೀದ್ ಮಠ, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ಶುಕೂರ್ ಹಾಜಿ, ಅಜೀಜ್ ಬಸ್ತಿಕಾರ್, ಶಬೀರ್ ಕೆಂಪಿ, ಅಮೀನ್ ಅಹ್ಸನ್, ಯೂಸುಫ್ ಪೆದಮಲೆ, ಇಸ್ಮಾಯಿಲ್ ತಂಙಳ್, ಅಬ್ದುಲ್ ರಹಿಮಾನ್ ಯುನಿಕ್, ಹಾರೂನ್ ರಶೀದ್ ಅಗ್ನಾಡಿ, ಇಬ್ರಾಹಿಂ ಆಚಿ, ಇಸ್ಮಾಯಿಲ್ ಇಕ್ಬಾಲ್, ಅಬ್ದುಲ್ ಹಮೀದ್ ಕರಾವಳಿ, ಝಕಾರಿಯಾ ಕೊಡಿಪ್ಪಾಡಿ, ಇಸಾಕ್ ಮೇದರಬೆಟ್ಟು, ಮಹಮ್ಮರ್ ಮುಸ್ತಾಫ, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು. 

ಮುಯ್ಯಿನ್ ಮುಹಮ್ಮದ್ ಕೆಂಪಿ ಕಿರಾಅತ್ ಪಠಿಸಿದರು. ನಝೀರ್ ಮಠ ವಂದಿಸಿದರು. ಇರ್ಷಾದ್ ಯು.ಟಿ. ಅಬ್ದುರ್ರಹ್ಮಾನ್ ಯುನಿಕ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article