
ಛತ್ರಪತಿ ಶಿವಾಜಿ ನಾಟಕ ಪ್ರದಶ೯ನದ ಉಳಿಕೆ ರೂ 4 ಲಕ್ಷ ಸಾಮಾಜಿಕ ಕಾಯ೯ಗಳಿಗೆ ಹಸ್ತಾಂತರ
Wednesday, May 21, 2025
ಮೂಡುಬಿದಿರೆ: ಕರಾವಳಿ ಕೇಸರಿಯ ಸ್ಥಾಪಕಾಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆಯವರ ನೇತೃತ್ತದಲ್ಲಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ನೇತೃತ್ವದ ತಂಡವು ಬೆಳುವಾಯಿಯಲ್ಲಿ ಪ್ರದರ್ಶಿಸಿದ ಛತ್ರಪತಿ ಶಿವಾಜಿ ನಾಟಕದಿಂದ ಸಂಗ್ರಹಗೊಂಡ ಹೆಚ್ಚುವರಿ ಮೊತ್ತ ರೂ 4 ಲಕ್ಷ ವನ್ನು ಹಿಂದು ಸುರಕ್ಷಾ, ಆರೋಗ್ಯ ಮತ್ತು ವಿದ್ಯಾನಿಧಿ ಮುಂತಾದ ಸಾಮಾಜಿಕ ಕಾಯ೯ಗಳಿಗಾಗಿ ಹಸ್ತಾಂತರಿಸುವ ಮೂಲಕ ಮಾದರಿಯಾಗಿದೆ.
ಸಮಾರಂಭದಲ್ಲಿ ಸಮಾಜಮುಖಿ ಕಾರ್ಯಕರ್ತರಾದ ಶಿವ ಎಲ್. ಪೂಜಾರಿ ಡೆಂಜಾರ್, ವಸಂತ ಶಿರ್ತಾಡಿ, ನಾಟಕದ ಕರ್ತೃ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ಹೀಲಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್ ಅವರನ್ನು ಸನ್ಮಾನಿಸಲಾಯಿತು.
ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ವಿಹಿಂಪ ಪ್ರಮುಖರಾದ ಸುಚೇತನ್ ಜೈನ್, ಉದ್ಯಮಿಗಳಾದ ವಿಶ್ವನಾಥ ಕೋಟ್ಯಾನ್ ಹನ್ನೇರು, ಸುರೇಶ್ ಪೂಜಾರಿ, ಕಿರಣ್ ರೈ, ರತ್ನಾಕರ ಶೆಟ್ಟಿ ಖಂಡಿಗ, ಜಯಪ್ರಕಾಶ್, ಹಿಂದು ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಸಂಯೋಜಕ ಹರೀಶ್ಚಂದ್ರ ಕೆ.ಸಿ. ಈ ಸಂದಭ೯ದಲ್ಲಿದ್ದರು.