ಬನ್ನಡ್ಕ ಕಾಲೇಜು ಮುಚ್ಚಲ್ಲ: ಶಾಸಕ ಕೋಟ್ಯಾನ್

ಬನ್ನಡ್ಕ ಕಾಲೇಜು ಮುಚ್ಚಲ್ಲ: ಶಾಸಕ ಕೋಟ್ಯಾನ್


ಮೂಡುಬಿದಿರೆ: ಬನ್ನಡ್ಕದಲ್ಲಿರುವ ವಿವಿ ಕಾಲೇಜು ಬಡ ವಿದ್ಯಾಥಿ೯ಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಕಳೆದ ಮೂರು ವಷ೯ಗಳಿಂದ ಶೇ. 100 ಫಲಿತಾಂಶವನ್ನು ದಾಖಲಿಸುತ್ತಾ ಬರುತ್ತಿದೆ. ಈ ಕಾಲೇಜನ್ನು ಮುಚ್ಚುತ್ತಾರೆಂಬ ವದಂತಿಗಳಿಗೆ ಕಿವಿ ಕೊಡಬೇಡಿ ಯಾವುದೇ ಕಾರಣಕ್ಕೂ ಈ ಕಾಲೇಜನ್ನು ಮುಚ್ಚಲ್ಲ ಬದಲಾಗಿ ವಿವಿ ಕಾಲೇಜನ್ನು ಸರಕಾರಿ ಕಾಲೇಜಾಗಿ ಪರಿವತಿ೯ಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು. ಅವರು ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ( ಮಂಗಳೂರು ವಿವಿ ಘಟಕ ಕಾಲೇಜು)ಇದರ 2024-25 ನೇ ಸಾಲಿನ ‘ಕಾಲೇಜು ವಾರ್ಷಿಕೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.


ಚುನಾವಣೆಯ ಸಂದಭ೯ದಲ್ಲಿ ಮೂಡುಬಿದಿರೆಗೆ ಸರಕಾರಿ ಪಿಯು ಮತ್ತು ಪದವಿ ಕಾಲೇಜು ಬೇಕೆಂಬ ಕೂಗು ಈ ಭಾಗದ ಜನರಲ್ಲಿತ್ತು ಅದಕ್ಕಾಗಿ ನಿರಂತರ ಹೋರಾಟ ಮಾಡಿ ಕಾಲೇಜನ್ನು ತರಲಾಗಿದೆ. ಈ ಕಾಲೇಜನ್ನು ಸುಸಜ್ಜಿತವಾದ ಕ್ಯಾಂಪಸ್ ನಲ್ಲಿ ನಿಮಾ೯ಣ ಮಾಡಬೇಕೆಂಬ ಉದ್ದೇಶದಿಂದ ಕಡಲಕೆರೆ ಬಳಿ ಈಗಾಗಲೇ 5 ಎಕ್ರೆ ಜಾಗವನ್ನು ಗುರುತಿಸಲಾಗಿದ್ದು ಇಲಾಖೆಯ ವತಿಯಿಂದ ದಾಖಲೆ ಪತ್ರಗಳ ಪ್ರಕ್ರಿಯೆ ಪ್ರಗತಿಯಲ್ಲಿದೆ.


ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು ಅದನ್ನು ಸಾಧಿಸುವ ಛಲ ಇರಬೇಕು ಮತ್ತು ಬದುಕುವ ವಿದ್ಯೆಯನ್ನು ಕಲಿಯಬೇಕು ಎಂದ ಅವರು ಗಮನವಿಟ್ಟು ಓದಿ, ಹಿರಿಯರಿಗೆ ಗೌರವ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಿ ಎಂದರು.


ಸಂಯೋಜಕ ಪ್ರೊ. ಕುಮಾರಸುಬ್ರಹ್ಮಣ್ಯ ಭಟ್ ಎ. ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ದಯಾನಂದ ನಾಯ್ಕ್, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಪಡುಮಾನಾ೯ಡು ಗ್ರಾ.ಪಂ. ಅಧ್ಯಕ್ಷ ವಾಸುದೇವ ಉಪಾಧ್ಯಾಯ, ಸದಸ್ಯೆ ಟೆಸ್ಲೀನಾ ಲೆರಿನಾ ರೊಡ್ರಿಗಸ್, ಪಡುಮಾನಾ೯ಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದಯಾನಂದ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಎ.ಎಸ್. ಕಾವೇರಮ್ಮ ಉಪಸ್ಥಿತರಿದ್ದರು.


ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಅಜಿತ್ ಕುಮಾರ್ ಡಿ’ಸೋಜ ಕಾಲೇಜಿನ ವಾಷಿ೯ಕ ಚಟುವಟಿಕೆಗಳ ವರದಿ ಮಂಡಿಸಿದರು. ಸಾಧಕ ವಿದ್ಯಾಥಿ೯ಳಾದ ನಿರೀಕ್ಷಾ (ಬಿ.ಎ), ಪ್ರಜ್ಞಾ (ಬಿ.ಕಾಂ), ಶ್ರಾವ್ಯ (ಬಿ.ಸಿ.ಎ) ಹಾಗೂ ನೆಟ್‌ಬಾಲ್ ಮತ್ತು ಸಾಫ್ಟ್‌ಬಾಲ್ ಕ್ರೀಡೆಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿರುವ ರಕ್ಷಿತಾ ಅವರನ್ನು ಗೌರವಿಸಲಾಯಿತು.

ರಕ್ಷಿತಾ ಬಿಡಿಸಿರುವ ತನ್ನದೇ ಕಲಾಕೃತಿಗೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಬಣ್ಣ ಹಚ್ಚಿದರು. ಉಪನ್ಯಾಸಕಿ ಆಶಾ ಡಿ’ಸೋಜ ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article