ಮೂಡುಬಿದಿರೆಯಲ್ಲಿ ಆಚಾರ್ಯ 108 ಗುಲಾಬ್‌ಭೂಷಣ್ ಮಹಾರಾಜರ ಚಾತುರ್ಮಾಸ

ಮೂಡುಬಿದಿರೆಯಲ್ಲಿ ಆಚಾರ್ಯ 108 ಗುಲಾಬ್‌ಭೂಷಣ್ ಮಹಾರಾಜರ ಚಾತುರ್ಮಾಸ


ಮೂಡುಬಿದಿರೆ: ಕುಂಥುಸಾಗರಜಿ ಮಹಾರಾಜರಿಂದ ಆಚಾರ್ಯ ಪದವಿ ಪಡೆದ ಜ್ಞಾನಿ ಆಚಾರ್ಯ 108 ಗುಲಾಬ್ ಭೂಷಣ್ ಮಹಾರಾಜರ ಚಾತುರ್ಮಾಸವು ಜೈನಮಠದಲ್ಲಿ ನಡೆಯಲಿದೆ ಎಂದು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದರು.

ಜೂ.20ರಂದು ಬೆಳಗ್ಗೆ 8 ಗಂಟೆಗೆ ಮೂಡುಬಿದಿರೆ ಪುರಪ್ರವೇಶ ಮಾಡಲಿರುವ ಮುನಿಮಹರಾಜರನ್ನು ಸಮಾಜ ಬಾಂಧವರು ಬಡಗುಬಸದಿ ಬಳಿ ಸ್ವಾಗತಿಸಿ ಮೆರವಣಿಗೆ ಮೂಲಕ ಜೈನಮಠಕ್ಕೆ ಬರಮಾಡಿಕೊಳ್ಳಲಾಗುವುದು.ಜುಲೈ 9ರಂದು ಕಲಶ ಪ್ರತಿಷ್ಟೆಯ ಮೂಲಕ ಚಾತುರ್ಮಾಸ ಆರಂಭವಾಗಲಿದ್ದು, ನಾಲ್ಕು ತಿಂಗಳ ಕಾಲ ನಡೆಯಲಿದೆ. ಈ ವೇಳೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. 

ಬಸದಿಗಳ ಮೊಕ್ತೇಸರ ಪಟ್ನಶೆಟ್ಟಿ ಸುಧೇಶ್ ಕುಮಾರ್, ಸ್ವಾಗತ ಸಮಿತಿಯ ಸಂಚಾಲಕ ಬಾಹುಬಲಿ ಪ್ರಸಾದ್, ಉದ್ಯಮಿ ಶೈಲೇಂದ್ರ ಕುಮಾರ್, ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article