
ಎನ್.ಎಚ್.ಎ.ಐ. ಹಾಗೂ ಡಿಬಿಲ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ
Thursday, June 5, 2025
ಮೂಡುಬಿದಿರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎನ್.ಎಚ್.ಎ.ಐ ಹಾಗೂ ದಿಲಿಪ್ ಬಿಲ್ಡ್ ಕಾನ್ ಲಿ.ವತಿಯಿಂದ ರಾ.ಹೆ.ಬದಿಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಸಸಿಗಳನ್ನು ನೆಟ್ಟು ಮಾತನಾಡಿದ ಅಬ್ದುಲ್ ಜಾವೆದ್ ಅವರು "ಈ ಹಸಿರಿನ ಹೆಜ್ಜೆಗಳು ನಾಳಿನ ಪರಿಸರದ ಭದ್ರತೆಗೆ ದಾರಿಯಾಗಲಿದೆ" ಎಂದರು.
ಎನ್.ಎಚ್.ಎ.ಐ ಪ್ರಾಜೆಕ್ಟ್ ಡೈರೆಕ್ಟರ್ ಅಬ್ದುಲ್ ಜಾವೆದ್ , ಡಿಬಿಎಲ್ ಜನರಲ್ ಮ್ಯಾನೇಜರ್ ಟಿ.ರಾಘವ ರಾವ್,ಟೀಮ್ ಲೀಡರ್ ಸುರೇಂದ್ರ ಪಟ್ಟಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.