ಅಶ್ರಫ್ ಅಪಘಾತ ಸಾವಿಗೆ ಹೆದ್ದಾರಿ ಪ್ರಾಧಿಕಾರ ಮತ್ತು ಜನಪ್ರತಿನಿದಿನಗಳು ಹೊಣೆ: ಮುನೀರ್ ಕಾಟಿಪಳ್ಳ

ಅಶ್ರಫ್ ಅಪಘಾತ ಸಾವಿಗೆ ಹೆದ್ದಾರಿ ಪ್ರಾಧಿಕಾರ ಮತ್ತು ಜನಪ್ರತಿನಿದಿನಗಳು ಹೊಣೆ: ಮುನೀರ್ ಕಾಟಿಪಳ್ಳ


ಸುರತ್ಕಲ್: ನಂತೂರಿನಿಂದ ಸುರತ್ಕಲ್ ವರೆಗಿನ ರಾಷ್ಟೀಯ ಹೆದ್ದಾರಿ ವಾಹನ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿದೆ ಹೆದ್ದಾರಿ ಪೂರ್ತಿ ಬೃಹತ್ ಗುಂಡಿಗಳು ನಿರ್ಮಾಣಗೊಂಡಿದೆ  ದ್ವಿಚಕ್ರ ವಾಹನ ಸವಾರರು ದಿನನಿತ್ಯ ಅಪಘಾತಕ್ಕೊಳಗಾಗಿ ಸಾವಿಗೀಡಾಗುತ್ತಿದ್ದಾರೆ ಹೆದ್ದಾರಿ ಪ್ರಾಧಿಕಾರ ಮತ್ತು ನಮ್ಮ ಜನಪ್ರತಿನಿದಿನಗಳು ಗಾಢ ನಿದ್ರೆಯಲ್ಲಿದ್ದಾರೆ ಎಂದು ಸಿಪಿಐಮ್ ದ.ಕ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.


ಅವರು ಇಂದು ಸುರತ್ಕಲ್ ಜಂಕ್ಷನ್ ಬಳಿ ನಾಗರಿಕ ಹೋರಾಟ ಸಮಿತಿ ಕಾನ -ಸುರತ್ಕಲ್ ನೇತೃತ್ವದಲ್ಲಿ ಹೆದ್ದಾರಿ ಗುಂಡಿಯಿಂದಾಗಿ ಅಪಘಾತಾಕ್ಕೊಳಗಾಗಿ ಸಾವನ್ನಪ್ಪಿದ ಅಶ್ರಫ್ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಒತ್ತಾಯಿಸಿ, ಹೆದ್ದಾರಿ ಗುಂಡಿ ಮುಚ್ಚದೆ ಜನರ ಸಾವು ನೋವಿಗೆ ಕಾರಣರಾದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು.


ಜಿಲ್ಲೆಯ ಸಂಸದರಾದ ಬ್ರಿಜೇಶ್ ಚೌಟ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಜಿಲ್ಲೆಯ ಹೆದ್ದಾರಿ ಸಮಸ್ಯೆ ಬಗೆಹರಿಸಿ ಸಾವು ನೋವು  ತಪ್ಪಿಸುವ ಬದಲಿಗೆ ಮತೀಯ ಹೆಣ ರಾಜಕೀಯದ ಗ್ಯಾಂಗ್ ಸೇರಿಕೊಂಡಿರುವುದು ವಿಷಾದನೀಯ ಎಂದು ಹೇಳಿದ ಅವರು ಹೆದ್ದಾರಿ ಗುಂಡಿ ಮುಚ್ಚದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.


ಪ್ರತಿಭಟನೆ ಉದ್ದೇಸಿಸಿ ಹೋರಾಟ ಸಮಿತಿಯ ಸಂಚಾಲಕ, ಡಿವೈಎಫ್ಐ ಜಿಲ್ಲಾ ಅಧ್ಯಕ್ಷರಾದ ಬಿಕೆ ಇಮ್ತಿಯಾಜ್, ಸಾಮಾಜಿಕ ಹೋರಾಟಗಾರ ಟಿ.ಎನ್. ರಮೇಶ್, ಅಶ್ರಫ್ ಅವರ ಸ್ನೇಹಿತ ಧೀರಜ್ ಪ್ರಸಾದ್ ಮೈಸೂರು ಮಾತನಾಡಿದರು.


ಪ್ರತಿಭಟನೆಯಲ್ಲಿ ಹಿರಿಯ ನ್ಯಾಯವಾದಿ, ಮೊಗವೀರ ಸಮಾಜದ ಮುಂದಾಳು ಗಂಗಾಧರ್ ಹೊಸಬೆಟ್ಟು, ಮಾಜಿ ಕಾಪೋರೇಟರ್ ಆಯಾಜ್ ಕೃಷ್ಣಾಪುರ, ಸಾಮಾಜಿಕ ಮುಂದಾಲುಗಳಾದ ಶಾಫಿ ಜನತಾಕಾಲನಿ, ಇಮ್ತಿಯಾಜ್ ಇಡ್ಯಾ, ಬಿ ಎಂ ಅಬೂಸಾಲಿ ಕೃಷ್ಣಾಪುರ, ಗಿರೀಶ್ ಜನತಾಕಾಲಾನಿ, ರಾಜೇಶ್ ಕಾನ, ಉದಯ ಆಶ್ರಯ ಕಾಲನಿ, ಫ್ರಾನ್ಸಿಸ್ ಕಾನ, ಅಶ್ರಫ್ ಇಡ್ಯಾ,ಅಬ್ದುಲ್ ಕಾದರ್ ಅಂಗರಗುಂಡಿ, ತೋಸೀಫ್ ಅಂಗರಗುಂಡಿ,ತ್ವಾಹಿರ್, ಅಶ್ರಫ್, ಆಸೀಫ್ ಜನತಾಕಾಲನಿ, ಚೆರಿಯೋನು, ಇಲ್ಯಾಸ್ ಕೃಷ್ಣಾಪುರ, ಡಿವೈಎಫ್ಐ ಮುಖಂಡರಾದ ಬಿ.ಕೆ. ಮಸೂದ್, ಸಾದಿಕ್ ಮೂಲ್ಕಿ, ಆಜ್ಮಲ್ ಕಾನ, ನವಾಜ್ ಕುಳಾಯಿ, ಐ ಮೊಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.


ಶ್ರೀನಾಥ್ ಕುಲಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article