ಡಾ. ಗಾಯತ್ರಿ ಪಾಟೀಲ್ ಅವರಿಗೆ ರಾಜ್ಯಮಟ್ಟದ ಪ್ರಬಂಧ ಮಂಡನೆಯಲ್ಲಿ ಮೂರನೇ ಸ್ಥಾನ

ಡಾ. ಗಾಯತ್ರಿ ಪಾಟೀಲ್ ಅವರಿಗೆ ರಾಜ್ಯಮಟ್ಟದ ಪ್ರಬಂಧ ಮಂಡನೆಯಲ್ಲಿ ಮೂರನೇ ಸ್ಥಾನ


ಮಂಗಳೂರು: ಅಖಿಲ ಕರ್ನಾಟಕ ಅರಿವಳಿಕಾ ಶಾಸ್ತ್ರಜ್ಞರ ವಾರ್ಷಿಕ ಸಮಾವೇಶ ‘ಇಸಾಕಾನ್ ಕರ್ನಾಟಕ 2025 ಮಂಗಳೂರು’ ಆ.8 ರಿಂದ 10 ರವರೆಗೆ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೆಎಸ್ ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ (ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ) ಅರಿವಳಿಕೆ ಶಾಸ್ತ್ರದ ಮೂರನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಗಾಯತ್ರಿ ಚಂದ್ರಕಾಂತ ಪಾಟೀಲ್ ಇವರು ಪ್ರಬಂಧ ಮಂಡನಾ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿರುತ್ತಾರೆ. 

ಸಮಾವೇಶದಲ್ಲಿ ಸುಮಾರು 580ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮಂಡಿಸಲ್ಪಟ್ಟವು. ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಇವರನ್ನು ಅಭಿನಂದಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article