ಅಲೋಶಿಯಸ್ನಲ್ಲಿ ‘ಸಮಾಜಶಾಸ್ತ್ರ ಉತ್ಸವ’ ‘ಸೋಷಿಯಸ್-4.0
ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಸುಪ್ರಿಯಾ ಹೆಗ್ಡೆ ಆರೂರ್ ಮುಖ್ಯ ಅತಿಥಿಯಾಗಿ ಮಾತನಾಡಿ ವ್ಯಕ್ತಿಗಳು ತಮ್ಮದೇ ಆದ ಯಶಸ್ಸಿನ ನಿಯತಾಂಕಗಳನ್ನು ಹೊಂದಿರಬೇಕು. ಸಮಾಜದ ಪ್ರಮಾಣಿತ ಸಮಯಸೂಚಿಗಳನ್ನು ಅನುಸರಿಸುವ ಬದಲು, ಒಬ್ಬರು ತಮ್ಮ ಪ್ರಯಾಣ, ಅವರ ಮಾರ್ಗ ಮತ್ತು ಅವರ ವೇಗವನ್ನು ಆರಿಸಿಕೊಳ್ಳಬೇಕು ಎಂದರು.
ಪ್ರಸಿದ್ಧ ಟೆಡ್ಎಕ್ಸ್ ಸ್ಪೀಕರ್ ಮತ್ತು ಅಹಮದಾಬಾದ್ನ ದಿ ಸ್ಕಿಲ್ ಸ್ಕೂಲ್ನ ಸಂಸ್ಥಾಪಕಿ ಗೀತಾರ್ಶ್ ಕೌರ್ ಪ್ರಧಾನ ಭಾಷಣದಲ್ಲಿ ‘ಜೀವನದ ಯಾವುದಾದರೂ ಒಂದು ಹಂತದಲ್ಲಿ ನಮ್ಮ ಗುರಿ ಏನು ಮತ್ತು ನಮ್ಮ ಮೈಲಿಗಲ್ಲು ಏನು ಎಂಬುದನ್ನು ನಾವು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ಅಲೋಶಿಯಸ್ ವಿವಿಯ ಉಪಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್ಜೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ರಿಜಿಸ್ಟ್ರಾರ್ ಡಾ. ಆಲ್ವಿನ್ ಡೇಸಾ, ಅಡ್ಮಿನ್ ಬ್ಲಾಕ್ ನಿರ್ದೇಶಕ ಡಾ.ಚಾರ್ಲ್ಸ್ ಫರ್ಟಾಡೊ ಮತ್ತು ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಹ್ಯುಮಾನಿಟೀಸ್ನ ಡೀನ್ ಡಾ. ರೋಸ್ ವೀರಾ ಡಿ ಸೋಜ ಅವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗೀತಾರ್ಶ್ ಕೌರ್ ಅವರನ್ನು ಅಲೋಶಿಯಸ್ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಂಯೋಜಕರಾದ ಸನ್ನಿಧಿ ಮತ್ತು ಯೇಶಾ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ಡಾ. ಜೋನ್ ರೀಟಾ ಒ ಬ್ರೇನ್ ಸ್ವಾಗತಿಸಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಜಸ್ಮೀತ್ ಕೌರ್ ಫಿಲೋಮಿನಾ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸವಿತಾ ಡಿ ಸೋಜ ವಂದಿಸಿದರು.
ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳು ನಡೆದವು. ನಗರದ ಸುತ್ತಮುತ್ತಲಿನ ಪಿಯು ಕಾಲೇಜುಗಳು ಕೊಲಾಜ್ ಮೇಕಿಂಗ್, ಫೇಸ್ ಪೇಂಟಿಂಗ್, ಸ್ಲ್ಯಾಮ್ ಕವನ, ಟರ್ನ್ಕೋಟ್ ಮತ್ತು ಥೀಮ್ ಡ್ಯಾನ್ಸ್ನಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಮೂಡುಬಿದಿರೆಯ ಆಳ್ವಾಸ್ ಕಾಲೇಜು ಚಾಂಪಿಯನ್ಸ್ ಟ್ರೋಫಿಯನ್ನು ಮತ್ತು ಕಾರ್ಕಳದ ಕ್ರೈಸ್ಟ್ ದಿ ಕಿಂಗ್ ಕಾಲೇಜು ರನ್ನರ್ ಅಪ್ ಟ್ರೋಫಿಯನ್ನು ಪಡೆದುಕೊಂಡಿತು.