ಸ್ಕೂಟರಿಗೆ ಕಾರು ಢಿಕ್ಕಿ ಹೊಡೆದು ಸವಾರನಿಗೆ ಗಾಯ

ಸ್ಕೂಟರಿಗೆ ಕಾರು ಢಿಕ್ಕಿ ಹೊಡೆದು ಸವಾರನಿಗೆ ಗಾಯ

ಬಂಟ್ವಾಳ: ವಿದ್ಯುತ್ ಚಾಲಿತ ಸ್ಕೂಟರಿಗೆ ಕಾರು ಢಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಬಿ.ಕಸಬಾ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿ ಸಂಭವಿಸಿದೆ.

ಗಾಯಗೊಂಡ ಸ್ಕೂಟರ್ ಸವಾರರನ್ನು ಬಂಟ್ವಾಳ ನಿವಾಸಿ ಆಲ್ವಿನ್ ಮಿನೇಜಸ್ (60) ಎಂದು ಹೆಸರಿಸಲಾಗಿದೆ. 

ಇವರು ತನ್ನ ವಿದ್ಯುತ್ ಚಾಲಿತ ಸ್ಕೂಟರಿನಲ್ಲಿ ಕಡೂರು-ಬಿ.ಸಿ. ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಬೆ ಜಂಕ್ಷನ್ ಮಾರ್ಗವಾಗಿ ಬಿ.ಸಿ. ರೋಡು ಕಡೆಗೆ ಬರುತ್ತಿರುವಾಗ  ಭಂಡಾರಿಬೆಟ್ಟುವಿನಲ್ಲಿ ಡಿವೈಡರ್ ತೆರೆದ ಸ್ಥಳದಲ್ಲಿ ಸೂಚನೆ ನೀಡಿ ಸ್ಕೂಟರನ್ನು ಬಲಭಾಗಕ್ಕೆ ಯು- ಟರ್ನ್ ಮಾಡುತ್ತಿರುವಾಗ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಸವಾರ ಆಲ್ವಿನ್ ಮೆನೇಜಸ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. 

ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article