ಸೇವಾಂಜಲಿ ಸೇವಾ ಕಾರ್ಯದ ಹಿಂದೆ ಉತ್ಕೃಷ್ಟವಾದ ದೃಷ್ಟಿಕೋನವಿದೆ: ಶಾಸಕ ಡಾ. ವೈ ಭರತ್ ಶೆಟ್ಟಿ

ಸೇವಾಂಜಲಿ ಸೇವಾ ಕಾರ್ಯದ ಹಿಂದೆ ಉತ್ಕೃಷ್ಟವಾದ ದೃಷ್ಟಿಕೋನವಿದೆ: ಶಾಸಕ ಡಾ. ವೈ ಭರತ್ ಶೆಟ್ಟಿ


ಬಂಟ್ವಾಳ: ಸೇವಾಂಜಲಿ ಸಂಸ್ಥೆಯ ಸೇವಾ ಕಾರ್ಯದ ಹಿಂದೆ ಉತ್ಕೃಷ್ಟವಾದ ದೃಷ್ಟಿಕೋನವಿದೆ. ಇಂತಹ ಪ್ರತಿಷ್ಠಾನಗಳಿಗೆ ಸಮಾಜ ಚಿರ ಋಣಿಯಾಗಿರಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.

ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.

ಕ್ಷಯ ಗುಣವಾಗುವ ರೋಗವಾಗಿದ್ದು, ಸರಿಯಾದ ಔಷಧೋಪಚಾರ ಹಾಗೂ ಪೌಷ್ಟಿಕಾಹಾರ ಸೇವನೆಯಿಂದ ರೋಗ ಗುಣಪಡಿಸಲು ಸಾಧ್ಯವಿದೆ ಎಂದರು.

ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸೇವಾಂಜಲಿಯ ಕಾರ್ಯ ಅಪೂರ್ವವಾದುದು, ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಂತೋಷ್ ತುಪ್ಪೆಕಲ್ಲು, ಸೇವಾಂಜಲಿ ಟ್ರಸ್ಟಿ ನಾರಾಯಣ ಬಡ್ಡೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸಂಶೋಧನಾ ವಿದ್ಯಾರ್ಥಿಗಳಾದ ಡಾ. ಮಹಮ್ಮದ್ ಪಾಷ, ಡಾ. ಸಮೃರ್ಥ್, ಸುಜೀರು ಪ್ರತಾಪ್ ಆಳ್ವ, ಸಂದೀಪ್ ನೀರೊಲ್ನೆ, ಪ್ರವೀಣ್ ಕಬೆಲ, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article