ಇತಿಹಾಸ ತಿಳಿದವರು ಇತಿಹಾಸ ಸೃಷ್ಠಿಸುತ್ತಾರೆ: ಡಾ. ವೈ. ಭರತ್ ಶೆಟ್ಟಿ

ಇತಿಹಾಸ ತಿಳಿದವರು ಇತಿಹಾಸ ಸೃಷ್ಠಿಸುತ್ತಾರೆ: ಡಾ. ವೈ. ಭರತ್ ಶೆಟ್ಟಿ


ಮಂಗಳೂರು: ಮಣ್ಣಿನ ಸಂಸ್ಕೃತಿ ಸಂಸ್ಕಾರಗಳನ್ನು ಮೈಗೂಡಿಸಿಕೊಂಡವರು ರಾಷ್ಟ್ರ ನಿರ್ಮಾಣ ಮಾಡಬಲ್ಲರು. ಶಿಕ್ಷಣವು ಜೀವನ ಕಲೆಗಳನ್ನು ಕಲಿಸಿದಾಗ ಅದು ಬದುಕಿಗೆ ಪೂರಕ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಾನವೀಯ ಸಂಬಂಧಗಳೇ ಜೀವಾಳ. ಯುವ ಜನತೆ ಮೊಬೈಲ್ ಗೀಳಿನಿಂದ ಹೊರಬಂದು ಮಣ್ಣಿನ ಇತಿಹಾಸ ತಿಳಿದು ಸಹಬಾಳ್ವೆ ಮೈಗೂಡಿಸಿಕೊಂಡಾಗ ಅವರಿಂದ ಹೊಸ ಇತಿಹಾಸ ನಿರ್ಮಾಣವಾಗಬಲ್ಲದು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.

ವಾಮಂಜೂರಿನ ಅಮೃತೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಏಳು ದಿನಗಳ ಕಾಲ ನಡೆದ ನಂತೂರಿನ ಡಾ. ಎನ್‌ಎಸ್‌ಎಎಂ ಕಾಲೇಜಿನ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ ಕೆ. ಮಾತನಾಡಿ, ಯುವ ಜನತೆ ನಶೆಯ ದಾಸರಾಗುತ್ತಿರುವ ಈ ದಿನಗಳಲ್ಲಿ ಅವುಗಳನ್ನು ತಡೆಗಟ್ಟಲು ಎನ್‌ಎಸ್‌ಎಸ್ ಕಂಕಣ ಬದ್ದವಾಗಿರುವುದು ಶ್ಲಾಘನೀಯ. ಸ್ವಚ್ಛತೆ ಹೊರತು ಪಡಿಸಿದ ಶಿಕ್ಷಣ ಅರ್ಥಹೀನ. ಇದು ಕೇವಲ ಮನೆ ವಠಾರಕ್ಕೆ ಸೀಮಿತವಾಗಿರದೆ ಸಾಮಾಜಿಕ ಸ್ವಚ್ಛತೆ ಕಡೆಗೂ ಯುವಜನತೆ ಬದ್ಧತೆಯನ್ನು ಹೊಂದಿರಬೇಕು. ಇಂತಹ ಉದಾತ್ತ ಗುಣಗಳನ್ನು ಇಂತಹ ಶಿಬಿರಗಳು ಬೆಳೆಸುತ್ತವೆ ಎಂದರು.

ಅಮೃತೇಶ್ವರ ಶಾಲೆಯ ಕೋಶಾಧಿಕಾರಿ ಜಯರಾಮ ಶೆಟ್ಟಿ, ಆಡಳಿತಾಧಿಕಾರಿ ಕೆ.ವಿ. ಶೆಟ್ಟಿ, ಕಿಟೆಲ್ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಠಲ್ ಎ., ಅಶೋಕನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಬಿ. ಶೆಟ್ಟಿ, ಲಯನ್ಸ್ ಜಿಲ್ಲಾ ವಲಯಾಧ್ಯಕ್ಷ ನರೇಶ್ ಕುಮಾರ್ ಶೆಟ್ಟಿ, ಸಂಸ್ಥೆಯ ಉಪಪ್ರಾಂಶುಪಾಲೆ ಅನ್ನಪೂರ್ಣ ನಾಯಕ್, ಎನ್‌ಎಸ್‌ಎಸ್ ಉಪಯೋಜನಾಧಿಕಾರಿ ವಿದ್ಯಾರಾಣಿ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಶ್ರೇಯಾ ಪ್ರಾರ್ಥಿಸಿದರು. ಗೀತಾ ಸ್ವಾಗತಿಸಿ, ಯೋಜನಾಧಿಕಾರಿ ಸಂತೋಷ್ ಎ. ಶೆಟ್ಟಿ ವಂದಿಸಿದರು. ರವಿಶಂಕರ ಹೆಗಡೆ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article