ಸೋಲಾರ್ ಬೇಲಿ ಮುರಿದ ಕಾಡಾನೆ

ಸೋಲಾರ್ ಬೇಲಿ ಮುರಿದ ಕಾಡಾನೆ


ಉಜಿರೆ: ಮಿತ್ತಬಾಗಿಲು ಗ್ರಾಮದ ಮಲ್ಲಜೋಡಿ ಎಂಬಲ್ಲಿ ಆನಂದನಾರಾಯಣ ಎಂಬವರ ತೋಟಕ್ಕೆ ಅಳವಡಿಸಿದ್ದ ಸೋಲಾರ್ ಬೇಲಿಯ ಕಂಬವನ್ನು ಕಾಡಾನೆ ಮುರಿದು ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ತೋಟದೊಳಗೆ ಹಾಕಿದ ಬೇಲಿ ಮೂಲಕ ಪ್ರವೇಶಿಸಲು ಪ್ರಯತ್ನಿಸಿದ ಕಾಡಾನೆ ಕಂಬವನ್ನು ಮುರಿದಿದ್ದು ಈ ವೇಳೆ ಸೋಲಾರ್ ಬೇಲಿಯ ಶಾಕ್ ಹೊಡೆದಿದ್ದು ತೋಟಕ್ಕೆ ಪ್ರವೇಶಿಸದೆ ವಾಪಸಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಇಲ್ಲಿ ಕಾಡಾನೆ ಗೇಟ ಅನ್ನು ಮುರಿದು ಹಾಕಿ ತೋಟ ಪ್ರವೇಶಿಸಿ ಕೃಷಿ ಹಾನಿ ಉಂಟು ಮಾಡಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article