ಪಾದಚಾರಿಗೆ ಬೈಕ್ ಢಿಕ್ಕಿ: ಗಾಯ
Monday, November 3, 2025
ಬಂಟ್ವಾಳ: ಬೈಕ್ ಢಿಕ್ಕಿ ಹೊಡೆದು ಪಾದಚಾರಿಯೋರ್ವರು ಗಾಯಗೊಂಡ ಘಟನೆ ಕೊಳಕೆ ಮಸೀದಿ ಬಳಿ ಸಂಭವಿಸಿದೆ.
ಗಾಯಾಳು ಪಾದಚಾರಿಯನ್ನು ಅಬ್ದುಲ್ ಮಜೀದ್ ಎಂದು ಹೆಸರಿಸಲಾಗಿದೆ. ಇವರು ಕೊಳಕೆ ಮಸೀದಿ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೋರುಗುಡ್ಡೆ-ಕೊಳಕೆ ರಸ್ತೆಯಲ್ಲಿ ಬೋರುಗುಡ್ಡೆ ಕಡೆಯಿಂದ ಬಂದ ಬೈಕ್ ಹಿಬಂದಿಯಿಂದ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಪರಿಣಾಮ ಗಾಯಗೊಂಡ ಮಜೀದ್ ಅವರನ್ನು ಮಂಗಳೂರಿನ ಖಾಸಿಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.