ಸಂಶೋಧನೆಗಳು ಉತ್ಪಾದನೆಗೆ ಪೂರಕವಾಗಿದ್ದು ದೇಶದ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗಬೇಕು: ವೆಂಕಟೇಶ ದೇಶಪಾಂಡೆ

ಸಂಶೋಧನೆಗಳು ಉತ್ಪಾದನೆಗೆ ಪೂರಕವಾಗಿದ್ದು ದೇಶದ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗಬೇಕು: ವೆಂಕಟೇಶ ದೇಶಪಾಂಡೆ

ಗಣನೆ ಮತ್ತು ಸಂವಹನದಲ್ಲಿ ಪ್ರಗತಿಯ ವಿದ್ಯಮಾನಗಳು: ಅಂತಾರಾಷ್ಟ್ರೀಯ ವಿಚಾರಸಂಕಿರಣ


ಉಜಿರೆ: ಸರ್ಕಾರವು ಆಧುನಿಕ ಸಂಶೋಧನೆಗಳಿಗೆ ಹೆಚ್ಚಿನ ನೆರವು ಮತ್ತು ಪ್ರೋತ್ಸಾಹ ನೀಡುತ್ತಿದ್ದು, ಯುವಜನತೆ ಇದರ ಸದುಪಯೋಗ ಪಡೆದು ದೇಶದ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗಬೇಕು ಎಂದು ಕರ್ನಾಟಕ ಡಿಜಿಟಲ್ ಇಕಾನಮಿ ಮಿಶನ್‌ನ ಕ್ಲಸ್ಟರ್ ಮುಖ್ಯಸ್ಥ ಧಾರವಾಡದ ವೆಂಕಟೇಶ ದೇಶಪಾಂಡೆ ಹೇಳಿದರು.


ಅವರು ಶುಕ್ರವಾರ ಉಜಿರೆಯಲ್ಲಿ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಡಿಜಿಟಲ್ ಇಕಾನಮಿ ಮಿಶನ್‌ನ ಬೆಂಗಳೂರು ವಿಭಾಗದ ಸಹಯೋಗದಲ್ಲಿ ಎರಡು ದಿನಗಳಲ್ಲಿ ಆಯೋಜಿಸಿದ ಗಣನೆ ಮತ್ತು ಸಂವಹನದಲ್ಲಿ ಪ್ರಗತಿಯ ವಿದ್ಯಮಾನಗಳು ಎಂಬ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.


ಆಧುನಿಕ ತಂತ್ರಜ್ಞಾನವಾದ ವೆಬ್‌ಸೈಟ್ ಹಾಗೂ ಲ್ಯಾಪ್‌ಟಾಪ್, ಆನ್‌ಲೈನ್ ಮೂಲಕ ಸಂಶೋಧನೆಯ ಪ್ರಸ್ತಾವನೆ ಮತ್ತು ಉದ್ದೇಶವನ್ನು ಸಾದರಪಡಿಸಿದಾಗ ಸರ್ಕಾರ ತಕ್ಷಣ ಐವತ್ತು ಲಕ್ಷ ರೂ. ಅನುದಾನ ಮಂಜೂರು ಮಾಡುತ್ತದೆ. ಮೌಲ್ಯಮಾಪನ ಕೂಡಾ ಆನ್‌ಲೈನ್ ಮೂಲಕ ನಡೆಸಲಾಗುತ್ತದೆ. ಯುವಜನತೆ ಇದರ ಸದುಪಯೋಗ ಪಡೆದು ಹೆಚ್ಚಿನ ಸಂಶೋಧನಾ ಕಾರ್ಯದಲ್ಲಿ ಆಸಕ್ತಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ವಿಭಾಗದ ಸಿಇಒ ಪೂರನ್‌ವರ್ಮ ಮಾತನಾಡಿ, ಆಧುನಿಕ ತಂತ್ರಜ್ಞಾನದಲ್ಲಿ ಕ್ಷಿಪ್ರಗತಿಯಲ್ಲಿ ಪರಿವರ್ತನೆಗಳಾಗುತ್ತಿದ್ದು, ವಿದ್ಯಾರ್ಥಿಗಳು ಇವುಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ. ಜಿಪಿಟಿ, ಕೃತಕ ಬುದ್ಧಿಮತ್ತೆ ಮೊದಲಾದ ಸ್ಮಾರ್ಟ್ ಪದ್ಧತಿಗಳಿಂದ ಎಲ್ಲಾ ಆಟೊಮೇಟಿಕ್ ಆಗಿ ಆಗುವುದರಿಂದ ಸಮಯ ಮತ್ತು ಪರಂಪರೆಯ ಹಿನ್ನೆಲೆಯಲ್ಲಿ ಸಂಸ್ಕೃತಿ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ ಸಂಶೋಧನೆಗಳನ್ನು ಮಾಡಬೇಕು ಎಂದರು.

ಉತ್ತಮ ಸಂವಹನ ಕೌಶಲ ಮತ್ತು ಚಿಂತನಾಲಹರಿಯೊಂದಿಗೆ ಮೂಲಭೂತ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಸಂಕೀರ್ಣ ಸಮಸ್ಯೆಗಳನ್ನು ಸರಳ ಭಾಗಗಳಾಗಿ ವಿಂಗಡಿಸಿ ಎಲ್ಲಾ ವಿಭಾಗಗಳಲ್ಲಿಯೂ ಪರಿಣತಿ ಹೊಂದಿ ಕ್ಷಿಪ್ರ ಬದಲಾವಣೆಗಳನ್ನು ಸ್ವೀಕರಿಸಲು ಮುಕ್ತವಾದ ಮನಸ್ಸು ಹೊಂದಿರಬೇಕು ಎಂದು ಪೂರನ್‌ವರ್ಮ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ ಕುಮಾರ್ ಟಿ. ಮಾತನಾಡಿ, ಏನೇ ಆದರೂ ಮೊದಲು ಮಾನವನಾಗು ಎಂಬಂತೆ ಮಾನವ ಜನಾಂಗದ ಕಲ್ಯಾಣವೇ ಸಂಶೋಧನೆಗಳ ಗುರಿಯಾಗಬೇಕು. ಡಿಜಿಟಲ್ ಮಾಧ್ಯಮ ಹಾಗೂ ಆಧುನಿಕ ಸಮಶೋಧನೆಗಳಿಂದ ನೈತಿಕತೆ ಹಾಗೂ ಸೌಹಾರ್ದಯುತ ಮಾನವೀಯ ಸಂಬಂಧಗಳು ಕಡಿತಗೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.

ಮಂಗಳೂರು ವಿಭಾಗದ ಉಪಾಧ್ಯಕ್ಷೆ ಡಾ. ಅಶ್ವಿನಿ ಹೊಳ್ಳ ಉಪಸ್ಥಿತರಿದ್ದರು.

ಒಟ್ಟು 1680 ಸಂಶೋಧನಾ ಲೇಖನಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ 160 ಸಂಶೋಧಕರ ಲೇಖನಗಳು ವಿಚಾರಸಂಕಿರಣದಲ್ಲಿ ಮಂಡನೆಯಾಗಲಿವೆ.

ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಂಯೋಜಕ ಡಾ. ಬಸವ ಟಿ. ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಪ್ರತಾಪಚಂದ್ರ ವಂದಿಸಿ, ಡಾ. ಸಂದೀಪ್ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article