ರಥಬೀದಿ ಕಾಲೇಜಿನಲ್ಲಿ ಜಿ.ಎಸ್.ಟಿ. ಕುರಿತು ಕಾರ್ಯಗಾರ
Sunday, December 7, 2025
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ, ಐಕ್ಯೂಎಸಿ ಹಾಗೂ ವಾಣಿಜ್ಯ ಸಂಘದ ಸಹಯೋಗದಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿಗಳಿಗಾಗಿ "GST insights:Recent changes and practical tips" ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ಡಿ.6 ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅನುಷ್ ಅವರು ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು ಹಾಗೂ ಜಿ.ಎಸ್.ಟಿ. ನೋಂದಣಿ ಪ್ರಕ್ರಿಯೆ ಕುರಿತಾಗಿ ಸಮಗ್ರ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ., ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರು ಸುವರ್ಣಮಾಲಿನಿ ಬಿ., ವಾಣಿಜ್ಯ ಶಾಸ್ತ್ರ ಸಂಘದ ಸಂಯೋಜಕ ಪ್ರವೀಣ್ ಶೆಟ್ಟಿ, ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯೋಜಕ ನಾಗರಾಜ್ ಎಂ, ಉಪನ್ಯಾಸಕಿ ಪ್ರಶಾಂತಿ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಧೀರಜ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ತುಷಾರ್ ಕೆ. ವಂದಿಸಿದರು. ಸುಮಾರು 220 ಬಿಕಾಂ ಪದವಿ ವಿದ್ಯಾರ್ಥಿಗಳು ಭಾಗವಹಿಸಿದರು.





