ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶ್ವ ಧ್ಯಾನ ದಿನಾಚರಣೆ ಪ್ರಯುಕ್ತ: ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಹಾಗೂ ಧ್ಯಾನ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶ್ವ ಧ್ಯಾನ ದಿನಾಚರಣೆ ಪ್ರಯುಕ್ತ: ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಹಾಗೂ ಧ್ಯಾನ ಕಾರ್ಯಕ್ರಮ


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಯಿಂದ ಡಿ.21 ರಂದು ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಮತ್ತು ಧ್ಯಾನ ಕಾರ್ಯಕ್ರಮ ನಡೆಯಿತು.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ, ಕುಮಾರಸ್ವಾಮಿ ವಿದ್ಯಾಲಯಯ ಅಧ್ಯಕ್ಷ ಗಣೇಶ್ ಪ್ರಸಾದ್ ನಾಯರ್, ಸಂಚಾಲಕ ಪ್ರಭಾಕರ ಪಡ್ರೆ ದೀಪ ಪ್ರಜ್ವಲನೆ ಮಾಡಿದರು.


ಬೆಳಗ್ಗೆ 4.30 ರಿಂದ 7 ಗಂಟೆಯವರೆಗೆ ಕಾರ್ಯಕ್ರಮ ನಡೆಯಿತು. ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರವನ್ನು ಶಿಕ್ಷಕರಾದ ಪ್ರೇಮಲತ ಶಿಕ್ಷಕರು ಬೆಳ್ತಂಗಡಿ ಇವರು ನಡೆಸಿಕೊಟ್ಟರು.


ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದೇವಿಚರಣ್, ಕುಂಬ್ರ ಇವರು ಷಣ್ಮುಖ ನಮಸ್ಕಾರ ಹಾಗೂ ಧ್ಯಾನದ ಮಹತ್ವ ತಿಳಿಸಿದರು.


3 ಹಂತದಲ್ಲಿ 6 ಸುತ್ತು ಯೋಗ ಷಣ್ಮುಖ ನಮಸ್ಕಾರವನ್ನು ತಾರಾನಾಥ, ಲಕ್ಷ್ಮೀ, ಭಾಸ್ಕರ ಇವರ ನೇತೃತ್ವದಲ್ಲಿ ನಡೆಯಿತು. ಶ್ರುತಿ ಶಿಕ್ಷಕರು ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

ಅಮೃತಾಸನದೊಂದಿಗೆ ಧ್ಯಾನವನ್ನು ಶಿವಾನಂದ ರೈ ಇವರು ನಡೆಸಿಕೊಟ್ಟರು. ದ.ಕ. ಕಾಸರಗೋಡು ಜಿಲ್ಲೆಗಳಿಂದ ಆಗಮಿಸಿದ ನಾಲ್ಕು ಸಾವಿರಕ್ಕೂ ಹೆಚ್ಚಿನ ಯೋಗಪಟುಗಳು ಸಾರ್ವಜನಿಕರೊಂದಿಗೆ ಭಕ್ತಿಭಾವದಿಂದ ದೇವಳದ ರಥಬೀದಿಯಲ್ಲಿ ಕಾರ್ಯಕ್ರಮ ಬೆಳಗ್ಗೆ 5 ಗಂಟೆಗೆ ಆಯೋಜನೆ ಗೊಂಡಿದ್ದರೂ ಮುಂಜಾನೆ 3 ಗಂಟೆಗೆ ಅತ್ಯಂತ ಶಿಸ್ತುಬದ್ಧವಾಗಿ ರಥಬಿದಿಯ ಫೂರ್ತಿ ಸಾಲಾಗಿ ಕುಳಿತು ತನ್ಮಯತೆಯಿಂದ ಭಾಗವಹಿಸಿ ಕೊಂಡು ಯೋಗ ಷಣ್ಮುಖ ನಮಸ್ಕಾರ ಮಾಡಿದರು.

ಶನಿವಾರ ರಾತ್ರಿ ಬಂದಿರುವ ಯೋಗಬಂಧುಗಳು ದೇವಾಲಯದ ರಥಬೀದಿ ಸಹಿತ ಪರಿಸರ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಪ್ರಾಂತ ಸಂಚಾಲಕ, ಸಂಘಟನಾ ವಿಭಾಗದ ಹರೀಶ್ ಕೋಟ್ಯಾನ್, ವಲಯ ಪ್ರಮುಖರಾದ ಅಶೋಕ್ ಜೈನ್, ಜಯರಾಮ ಚೆಂಬುಗುಡ್ಡೆ, ಪ್ರತಾಪ ರಾವ್, ಜಿಲ್ಲಾ ಪ್ರಮುಖರಾದ ಕನಕಾ ಅಮೀನ್, ಗಣೇಶ್ ಸುವರ್ಣ, ಲೋಕೇಶ್, ಈಶ್ವರ್ ಕೊಟ್ಟಾರಿ, ಶಿವಪ್ರಸಾದ್ ಪೊಳಲಿ, ಹರೀಶ್ ಅಂಚನ್, ಜಗದೀಶ್ವರ, ಮನೋಹರ್, ಜೀವನ್  ಶ್ರೀಕಲಾ, ಗೀತಾ ಉಳ್ಳಾಲ, ತಾಲೂಕು ಪ್ರಮುಖರಾದ ಯೋಗೀಶ್ ಆಚಾರ್ಯ, ತಾಲೂಕು ಸಂಚಾಲಕರಾದ ಕೃಷ್ಣಾನಂದ, ಹರಿಪ್ರಸಾದ್, ವಸಂತ, ಮಾಧುರಿ, ಸುನಂದ  ನಗರ ಸಂಚಾಲಕ ಶ್ರೀನಿವಾಸ್, ಜನಾರ್ದನ್, ಸುಂದರ, ಶ್ಯಾಮಲ, ಗುರುರಾಜ್, ಸದ್ಯೋಜಾತ್ ಉಪಸ್ಥಿತರಿದ್ದರು. ಕಾರ್ತಿಕ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article