ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯನಮಸ್ಕಾರ ಕಾರ್ಯಕ್ರಮ

ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯನಮಸ್ಕಾರ ಕಾರ್ಯಕ್ರಮ


ಮಂಗಳೂರು: ಎಸ್.ಪಿ.ವೈ.ಎಸ್.ಎಸ್. (ರಿ) ಕರ್ನಾಟಕ ಯೋಗ ಸಮಿತಿಯ ವತಿಯಿಂದ ದ.ಕ. ಜಿಲ್ಲೆಯ ವಿವಿದೆಡೆ 16 ದೇವಾಲಯಗಳಲ್ಲಿ ರಥಸಪ್ತಮಿ ಪ್ರಯುಕ್ತ ಭಾನುವಾರ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.

ಈ ಪ್ರಯುಕ್ತ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ದೇವಸ್ಥಾನದಲ್ಲಿಯೂ ಕ್ಷೇತ್ರದ ಅನುವಂಶೀಯ ಪ್ರಧಾನ ಅರ್ಚಕ ಪದ್ಮನಾಭ ಭಟ್ ಹಾಗೂ ಶ್ರೀ ರಾಮಕೃಷ್ಣ ತಪೋವನದ ಸ್ಥಾಪಕಧ್ಯಕ್ಷ ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಮತ್ತು ಅರ್ಚಕ ಶಶಿಮಹಾರಾಜ್, ಕಾರ್ಯಕ್ರಮ ಸಂಚಾಲಕರಾದ ಸತೀಶ್ ಗರೋಡಿ, ಭಾರತಿ ನಾಗೇಶ್ ಪೊಳಲಿ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಂಜಾನೆ 4.45 ಕ್ಕೆ ಭಜನೆಯೊಂದಿಗೆ ಪ್ರಾರಂಭವಾಗಿ ಅಮೃತ ವಚನ ಪಂಚಾಂಗ ಪಠಣಾ, ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರ ಮತ್ತು 3 ಹಂತಗಳ 9 ಆವೃತ್ತಿಯಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ, ಅಮೃತಾಸನವನ್ನು ನುರಿತ ಯೋಗ ಶಿಕ್ಷಕರಿಂದ ಪ್ರಾತ್ಯಕ್ಷತೆಯ ಮೂಲಕ ನಡೆಸಲಾಯಿತು. ಬೆಳಗ್ಗೆ 7 ಗಂಟೆಗೆ ಯೋಗ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

ರಥಸಪ್ತಮಿಯಂದು ಶ್ರೀದೇವಿ ಸಾನಿಧ್ಯದಲ್ಲಿ ಸಾಮೂಹಿಕ 108 ಸೂರ್ಯನಮಸ್ಕಾರ ಮಾಡುವ ಮಹತ್ವವನ್ನು ಪೊಳಲಿ ನಗರದ ಸಹಸಂಚಾಲಕರಾದ ಸ್ಮಿತಾ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 550ಕ್ಕೂ ಯೋಗಬಂಧುಗಳು ಜೊತೆಗೆ ಸಾರ್ವಜನಿಕರು ಕೂಡ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಪೊಳಲಿ ನಗರ ಸಂಚಾಲಕರು ಜನಾರ್ಧನ್ ಪೆರಾರ, ನಗರದ ಪ್ರಮುಖರಾದ ಕೇಶವ ಕಾವೇರಿ, ಮೋಹನ್ ದಾಸ್ ಪೊಳಲಿ, ಅಶೋಕ ಪಾಲೇಮಾರ್, ಶಶಿರಾಜ್ ಪುಂಚಮೆ, ರಾಜೇಶ್ವರಿ ಪೊಳಲಿ, ಕುಮಾರ್ ಕೈಕಂಬ, ಕೃಷ್ಣ ಕೈಕಂಬ, ಅರುಣ್ ಆರಂಬೋಡಿ, ಶಶಿಕಲಾ ಕುಕ್ಕಿಪಾಡಿ, ಸುರೇಂದ್ರ ಸಿದ್ದಕ್ಕಟ್ಟೆ, ನಿತಿನ್ ಅರಳ, ಸುನೀತಾ ರಾಯಿ, ಕೃಷ್ಣಪ್ಪ ಆರಂಬೋಡಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾವ್ಯ ಪೊಳಲಿ ನಿರೂಪಿಸಿ, ಸತೀಶ್ ಗರೋಡಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article