ಕೊರಗ ಸಮುದಾಯದ ಆನಾರೋಗ್ಯ-ಜನಸಂಖ್ಯೆ ಇಳಿಕೆ ಬಹುದೊಡ್ಡ ಸಮಸ್ಯೆ: ಸಮಗ್ರ ವೈದ್ಯಕೀಯ ಅಧ್ಯಯನ ಅಗತ್ಯ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಒಂಭತ್ತು ಗ್ರಾಮಗಳಲ್ಲಿ ವಾಸಿಸುವ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ಇನ್ನೂ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್ ಸಂಪರ್ಕವಾಗದಿರುವ ಬಗ್ಗೆ ವಿಷಾದವಿದೆ. ಅಲ್ಲಿನ ಜನರು ಇನ್ನೂ ಕತ್ತಲೆಯಲ್ಲಿ ವಾಸಿಸುತ್ತಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಚಿವರು, ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದ್ದೇನೆ ಎಂದು ಪಲ್ಲವಿ ತಿಳಿಸಿದರು.
ಆಧಾರ್ ಕಾರ್ಡ್, ರೇಶನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಿಗದಿರುವುದು, ಹಕ್ಕುಪತ್ರ ಇಲ್ಲದಿರುವುದು ಗಂಭೀರ ಪ್ರಮಾದವಾಗಿದೆ. ನಿಗಮದ ಅನುದಾ ನದಿಂದ ಮೂಲಭೂತ ಸೌಕರ್ಯ ಕಲ್ಪಿಸಲು ಮತ್ತು ಶಿಕ್ಷಣ ಹಾಗೂ ಆರೋಗ್ಯದ ಕಡೆ ಹೆಚ್ಚಿನ ಕ್ರಮ ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪಲ್ಲವಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಲಿತ ಸಮುದಾಯದಿಂದ ಬಂದ ತನಗೆ ಈ ಜನರು ಅನುಭವಿಸುವ ಸಂಕಷ್ಟಗಳ ಅರಿವು ಇದೆ. ತಾನು ಈ ನಿಗಮದ ಪ್ರಥಮ ಅಧ್ಯಕ್ಷೆಯಾಗಿ ನೇಮಕಗೊಂಡಿರುವೆ. ತ ನ್ನ ಅಧಿಕಾರವಧಿ ಮುಗಿದ ಬಳಿಕವೂ ಸಮುದಾಯ ನೆನಪಿಸುವಂತಹ ಹೆಜ್ಜೆ ಗುರುತು ಹಾಕಬೇಕೆಂದಿದ್ದೇನೆ.ಅದಕ್ಕಾಗಿ ಕಾಲಮಿತಿಯೊಳಗೆ ಎಲ್ಲಾ ಇಲಾಖೆಗಳು ಸಮ ನ್ವಯದಿಂದ ಕೆಲಸ ಮಾಡಬೇಕು. ಮೂರು ತಿಂಗಳಿಗೊಮ್ಮೆ ಅನುಪಾಲನಾ ವರದಿ ನೀಡಲು ಸೂಚಿಸಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಮಲತಾ ಮತ್ತು ನಿಗಮದ ಅಧಿಕಾರಿ ಆನಂದ ಕುಮಾರ್ ಏಕಲವ್ಯ ಮತ್ತಿತರರು ಉಪಸ್ಥಿತರಿದ್ದರು.
