ಗುರಿ ತಲುಪಲು ಶಿಸ್ತು ಮುಖ್ಯ: ಅಥ್ವಿಕ್ ಅಮಿತ್ ಕುಮಾರ್
ಅವರು ಆಳ್ವಾಸ್ನ ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ರೋಸ್ಟ್ರಂ ಸ್ಪೀಕರ್ಸ್ ಕ್ಲಬ್ ವತಿಯಿಂದ ನಡೆದ "ತರಗತಿಯಿಂದ ಸಮ್ಮೇಳನದ ವರೆಗೆ ನನ್ನ ಉದ್ಯಮಶೀಲತಾ ಪ್ರಯಾಣ" ಪ್ರೇರಣಾದಯಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ತನ್ನ ತಂದೆಯ ಉದ್ಯಮಕ್ಕೆ ಸಂಬAದಿಸಿದ ಸಭೆಗಳಲ್ಲಿ ಭಾಗಿಯಾದ್ದರಿಂದ ತನ್ನದೇ ಆದ ಉದ್ಯಮವನ್ನು ಪ್ರಾರಂಭಿಸಲು ಸ್ಫೂರ್ತಿಯಾಯಿತು ಎಂದರು.
ನಾನು ವ್ಯವಹಾರಿಕ ಸಮ್ಮೇಳನಗಳಲ್ಲಿ ಭಾಗಿಯಾಗವುದರ ಮೂಲಕ ಜಾಗತಿಕ ಹೂಡಿಕೆದಾರರು, ಉದ್ಯಮಿಗಳನ್ನು ವಿವಿಧ ಕಂಪನಿಗಳ ಸ್ಥಾಪಕರ ಪರಿಚಯ ಮಾಡಿಕೊಂಡೆ. ಆದರೆ ನಂತರದ ದಿನಗಳಲ್ಲಿ ಆ ಸಂಪರ್ಕ ಉಳಿದುಕೊಳ್ಳಲಿಲ್ಲ. ಇದರಿಂದ ಹಲವು ಅವಕಾಶ ಕೈ ತಪ್ಪಿ ಹೋಯಿತು. ಆದ್ದರಿಂದ ನಾನು ಜೋಜೋ ಕನೆಕ್ಟ್ ಅನ್ನು ಸ್ಥಾಪಿಸಿದೆ ಎಂದರು. ಇದು ಉದ್ಯಮಿಗಳನ್ನು, ಹೂಡಿಕೆದಾರರನ್ನು ಸಂಪರ್ಕ ಮಾಡಲು ಸಹಾಯ ಮಾಡಿತು ಎಂದರು.
ನಂತರ ನಡೆದ ಪ್ರಶ್ನಾವಳಿಯಲ್ಲಿ ಶಿಕ್ಷಣ ಮತ್ತು ಉದ್ಯಮವನ್ನು ಹೇಗೆ ಜೊತೆಗೆ ನಿಭಾಯಿಸುತ್ತಾರೆ. ವ್ಯವಹಾರದಲ್ಲಿ ಅವರಿಗೆ ಉತ್ಸಾಹಬರಲು ಕಾರಣವೇನು ಇಂತಹ ಪ್ರಶ್ನೆಗಳಿಗೆ ಉತ್ತರಿಸಿದರು. ಯುವಕರು ತಮ್ಮ ಯೋಚನೆಗಳನ್ನು ಕಾರ್ಯಗತಗೊಳಿಸುವಂತೆ ಸಲಹೆ ನೀಡಿದರು. ಕೇವಲ ನಮ್ಮ ಯೋಜನೆಗಳ ಬಗ್ಗೆ ಯೋಚಿಸುವುದರ ಬದಲು ಅದನ್ನು ಪರಿಹಾರ ಮಾಡುವಂತಹ ಕೆಲಸ ಮಾಡಬೇಕು ಎಂದರು. ಆರಂಭಿಕ ಹಂತಗಳಲ್ಲಿ ಯುವ ಉದ್ಯಮಿಗಳು ಎದುರಿಸುವ ತೊಂದರೆಗಳು ಮತ್ತು ವೈಫಲ್ಯಗಳ ಬಗ್ಗೆಯೂ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ರೋಸ್ಟ್ರುಮ್ ಸ್ಪೀಕರ್ಸ್ ಕ್ಲಬ್ನ ಅಧ್ಯಕ್ಷೆ ಡಾ. ದೀಪಾ ಕೊಟ್ಟಾರಿ ಉಪಸ್ಥಿತರಿದ್ದರು. ನಿಯತಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
