ಮೂಡುಬಿದಿರೆ: ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕ ಕುಟುಂಬಕ್ಕೆ ವಾತ್ಸಲ್ಯ ಕಿಟ್ ವಿತರಣೆ

ಮೂಡುಬಿದಿರೆ: ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕ ಕುಟುಂಬಕ್ಕೆ ವಾತ್ಸಲ್ಯ ಕಿಟ್ ವಿತರಣೆ


ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ವತಿಯಿಂದ ತಾಲೂಕಿನ ಅಲಂಗಾರು ವಲಯದ ಅಮನಬೆಟ್ಟು ಕಾರ್ಯಕ್ಷೇತ್ರದಲ್ಲಿ ವಾತ್ಸಲ್ಯ ಸದಸ್ಯರಾದ ಗೀತಾ ಅವರಿಗೆ ದಿನ ಬಳಕೆಯ  ವಸ್ತುಗಳ ವಾತ್ಸಲ್ಯ ಕಿಟ್ ನ್ನು ವಿತರಿಸಲಾಯಿತು.

ಗೀತಾ ಅವರಿಗೆ ಕ್ಷೇತ್ರದಿಂದ ಮಾಶಾಸನವೂ ಕೂಡಾ ನೀಡಲಾಗುತ್ತಿದೆ. 

ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಬಿ.ಧನಂಜಯ, ಒಕ್ಕೂಟದ ಅಧ್ಯಕ್ಷ  ಸುರೇಂದ್ರ ಪೂಜಾರಿ, ಯುವತಿ ಮಂಡಲದ ಅಧ್ಯಕ್ಷೆ  ಆಶಾ, ಒಕ್ಕೂಟದ ಪದಾಧಿಕಾರಿಗಳಾದ  ಜಯಂತಿ, ಮೋಹಿನಿ, ವಲಯದ ಮೇಲ್ವಿಚಾರಕರಾದ ಚಂದ್ರಹಾಸ, ಜ್ಞಾನ ವಿಕಾಸ ಸಮನ್ವಧಿಕಾರಿ  ವಿದ್ಯಾ, ಸೇವಾಪ್ರತಿನಿಧಿ  ಉಷಾ ಕಿರಣ ಅವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article