ಸಂತ ಫಿಲೋಮಿನಾ ಕಾಲೇಜಿನ ಎನ್ಎಸ್ಎಸ್ನ ವಾರ್ಷಿಕ ವಿಶೇಷ ಶಿಬಿರ ಸಮಾರೋಪ
ವರದಿ ಬರವಣಿಗೆಯ ಬಹುಮಾನವನ್ನು ದ್ವಿತಿ, ಸ್ಪಂದನ, ಕೀರ್ತನಾ, ಅಶ್ವಿನಿ ಇವರು ಪಡೆದುಕೊಂಡರು. ನಂತರ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಅರಿಯಡ್ಕ ಇವರಿಗೆ ನೆನಪಿನ ಕಾಣಿಕೆಯಾಗಿ ಕುರ್ಚಿ ನೀಡಲಾಯಿತು. ಸಂಚಾಲಕರಾದ ಅತಿ ವಂದನೀಯ ಲಾರೆನ್ಸ್ ಮಸ್ಕರೇನಸ್ ಇವರು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಸಂತ ಫಿಲೋಮಿನಾ ಪಾಲೇಜಿನ ಸಂಚಾಲಕರಾದ ಅತಿ ವಂದನೀಯ ಲಾರೆನ್ಸ್ ಮಸ್ಕರೇನಸ್, ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಶೇಷಾಪ್ಪ, ಉಪ ಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್, ಮೀನಾಕ್ಷಿ ಪಾಪೆಮಜಲು, ಶ್ರೀಧರ ಪೂಜಾರಿ, ಸಚಿನ್ ಪಾಪೆಮಜಲು, ಮಲ್ಲಿಕಾ ಜೆ ರೈ, ಡಾ ಹಾಜಿ. ಎಸ್ ಅಬೂಬಕ್ಕರ್ ಆರ್ಲಪದವು ಶಶಿಕಲಾ, ಪ್ರವೀಣಾ ಇವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪುಷ್ಪ ಎನ್. ಸ್ವಾಗತಿಸಿ, ಡಾ. ಕೆ. ಚಂದ್ರಶೇಖರ್ ವಂದಿಸಿದರು. ಶಿಬಿರದ ವರದಿಯನ್ನು ಗೀತಾ ಕೆ.ಬಿ. ಮತ್ತು ರತನ್ ಇವರು ವಾಚಿಸಿದರು. ತಮ್ಮ ಅನುಭವಗಳನ್ನು ಮುಕ್ತವಾಗಿ ತಅಪರ್ಣ ಎಸ್, ಸುಷ್ಮಾ, ರಿಷಿಕಾ, ಮನೀಷ್,ಆಕಾಶ್ ರೈ ಅವರು ತಿಳಿಸಿದರು.
ವಿಶೇಷ ಸಾಧನೆ ಮಾಡಿದವರ ವರದಿಯನ್ನು ಅಶ್ವಿನಿ ಮತ್ತು ಬಹುಮಾನ ವಿತರಣಾ ಪಟ್ಟಿಯನ್ನು ವಿಷ್ಣುಜೀತ್ ರವರು ವಾಚಿಸಿದರು, ಕಾರ್ಯಕ್ರಮವನ್ನು ಸ್ಪಂದನಾ ನಿರೂಪಿಸಿದರು.

