ವಾಲ್ಪಾಡಿ ಮಸೀದಿಯ ಆವರಣದಲ್ಲಿ 'ಸೌಹಾರ್ದ ಇಫ್ತಾರ್ ಕೂಟ'
Wednesday, March 18, 2026
ಮೂಡುಬಿದಿರೆ: ಫ್ರೆಂಡ್ಸ್ ವಾಲ್ಪಾಡಿ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವು ಭಾನುವಾರ ವಾಲ್ಪಾಡಿ ಮಸೀದಿ ವಠಾರದಲ್ಲಿ ನಡೆಯಿತು.
ಗ್ರಾ.ಪಂ.ಮಾಜಿ ಅಧ್ಯಕ್ಷ ಫ್ರೆಡ್ರಿಕ್ ಪಿಂಟೊ, ಶಿರ್ತಾಡಿ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಗ್ರಾ.ಪಂ.ಸದಸ್ಯ ಶ್ರೀಧರ ಬಂಗೇರ, ಮಾಜಿ ಸದಸ್ಯ ಲ್ಯಾನ್ಸಿ ಪಿಂಟೊ, ವೇದಪ್ರಕಾಶ್ ಅಳಿಯೂರು, ಸುಕುಮಾರ್ ಜೈನ್ ಅಳಿಯೂರು, ಪ್ರವೀಣ್ ಮೆಂಡೋನ್ಸ, ವಾಲ್ಟರ್ ಪಿಂಟೊ, ಚೆನ್ನ ನಲ್ಕೆ ವಾಲ್ಪಾಡಿ, ಆನಂದ ಮೇಸ್ತ್ರಿ, ಜನಾರ್ದನ ವಾಲ್ಪಾಡಿ, ಶೇಖರ್ ವಾಲ್ಪಾಡಿ, ಮೇಘರಾಜ್, ಸಂತೋಷ್ ಕೋಟ್ಯಾನ್ ಭಕ್ತಪ್ರಿಯ, ಪ್ರದೀಪ್ ಪಣಪಿಲ,ಶಿರ್ತಾಡಿ ರಿಕ್ಷಾ ಚಾಲಕ ಮಾಲಕರು,ವಸಂತ ಪೂಜಾರಿ,ಚೇತನ್ ಮಡಿವಾಳ,ಸುರೇಶ್ ಮಂಗಿಲ,ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಜಮಾತ್ ಕಮಿಟಿ ಅಧ್ಯಕ್ಷ ಶರೀಫ್ ಎಂ.ಎಂ, ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು, ಶುಕೂರ್ ಸಾಹೇಬ್, ಫ್ರೆಂಡ್ಸ್ ವಾಲ್ಪಾಡಿಯ ಅಶ್ರಫ್ ವಾಲ್ಪಾಡಿ ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.