ಮೂಡುಬಿದಿರೆ: ಜವನೆರ್ ಬೆದ್ರದಿಂದ "ಕೃಷ್ಣೋತ್ಸವ" ಪೋಸ್ಟರ್ ಬಿಡುಗಡೆ

ಮೂಡುಬಿದಿರೆ: ಜವನೆರ್ ಬೆದ್ರದಿಂದ "ಕೃಷ್ಣೋತ್ಸವ" ಪೋಸ್ಟರ್ ಬಿಡುಗಡೆ


ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಇತಿಹಾಸ ಪ್ರಸಿದ್ದ 110ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಘಟನೆ ಆಯೋಜಿಸುವ ಬೆದ್ರದ ಕೃಷ್ಣೋತ್ಸವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವೂ ಇಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.


ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮುಂದಿನ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳು ಸುಸುತ್ರವಾಗಿ ನಡೆಯಲು ಪ್ರಾರ್ಥಿಸಿ, ದೇವರಿಗೆ ಫಲಪುಷ್ಪವನ್ನು ಅರ್ಪಿಸಿದ ಬಳಿಕ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವೂ ನಡೆಯಿತು. ಪೋಸ್ಟರ್ ಬಿಡುಗಡೆ ಸಂಧರ್ಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಶ್ರೀ ಗುರುಪ್ರಸಾದ್ ಹೊಳ್ಳ, ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕ ಶ್ರೀ ಅಮರ್ ಕೋಟೆ, ಸಂಘಟನೆಯ ಸಂಚಾಲಕರಾದ ಶ್ರೀ ರಂಜಿತ್ ಶೆಟ್ಟಿ, ಅಬ್ಬಕ್ಕ ಬ್ರಿಗೇಡ್'ನ ಸಂಚಾಲಕರಾದ ಶ್ರೀಮತಿ ಸುನೀತ ಉದಯ್ ಹಾಗೂ ದಿನೇಶ್ ನಾಯ್ಕ್, ನಾರಯಣ ಪದುಮಲೆ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article