ಬೆಳುವಾಯಿ: ಯುವಶಕ್ತಿ ಸಂಘಟನೆಯಿಂದ ಶ್ರಮದಾನ
Sunday, July 12, 2026
ಮೂಡುಬಿದಿರೆ: 'ಯುವಶಕ್ತಿ' ಸಂಘಟನೆಯ ನೇತೃತ್ವದಲ್ಲಿ ಭಾನುವಾರ ಸರಕಾರಿ ಹಿ. ಪ್ರಾ. ಶಾಲೆ ಬೆಳುವಾಯಿ ಮೈನ್ ಶಾಲಾ ಆವರಣ ಮತ್ತು ಶ್ಮಶಾನಕ್ಕೆ ಹೋಗುವ ದಾರಿಯಲ್ಲಿ ತುಂಬಿದ್ದ ಕಳೆ, ಗಿಡ ಗಂಟಿಗಳನ್ನು ಭಾನುವಾರ ಶ್ರಮದಾನದ ಮೂಲಕ ತೆಗೆದು ಸ್ವಚ್ಛಗೊಳಿಸಲಾಯಿತು.
ಯುವಶಕ್ತಿ ಸಂಘಟನೆಯ ಮಂಜುನಾಥ್ ಶೆಟ್ಟಿ, ಬೆಳುವಾಯಿ ಗ್ರಾ.ಪಂ.ನ ಮಾಜಿ ಸದಸ್ಯ ರಘು, ವಕೀಲ ಆನಂದ ಶಾಂತಿನಗರ, ಹರೀಶ್ ಟೈಲರ್,ಪೊಲು೯ ಸೆಲೂನ್ ನ ಗಿರೀಶ್ ಶೆಟ್ಟಿ, ಹರೀಶ್ ಶೆಟ್ಟಿ ಬೆಳುವಾಯಿ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.